Advertisement
ತಾಲೂಕಿನ ಸಾತನೂರು ಹೋಬಳಿಯ ಕಾಡಹಳ್ಳಿ ಗ್ರಾಮದ ಶಿವಮಾದೇಗೌಡ ಹಣ ಕಳೆದುಕೊಂಡರು. ಇವರು, ಗುರುವಾರ ಹೊನ್ನಿಗನಹಳ್ಳಿ ಗ್ರಾಮದಲ್ಲಿನ ಕೆನರಾ ಬ್ಯಾಂಕಿನಲ್ಲಿ 49 ಗ್ರಾಂ ಚಿನ್ನದ ಒಡೆವೆಯನ್ನು 1.11ಲಕ್ಷ ರೂ.ಗೆ ಅಡವಿಟ್ಟು ಹಣ ಡ್ರಾ ಮಾಡಿಕೊಂಡು ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು. ಶಿವಮಾದು ಅವರ ಬಳಿ ಇದ್ದ ಹಣವನ್ನು ದರೋಡೆ ಮಾಡಲು ಸಂಚು ಮಾಡಿದ್ದ ಮುಸುಕು ವೇಷಧಾರಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಕೊಂಡು ಬಂದಿದ್ದಾರೆ. ಶಿವಮಾದು ಅವರು ಬ್ಯಾಂಕ್ನಿಂದ ಡ್ರಾ ಮಾಡಿದ್ದ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಕಾಡಹಳ್ಳಿ ಗ್ರಾಮದಲ್ಲಿರುವ ತಮ್ಮ ಮನೆಗೆ ಹೊಗ ಬೇಕು ಎನ್ನುವಷ್ಟರಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ವಿಳಾಸ ಕೇಳುವ ನೆಪದಲ್ಲಿ ಶಿವಮಾದು ಅವರನ್ನು ಕರೆದಿದ್ದಾರೆ. ಖದೀಮರ ಸಂಚನ್ನು ಅರಿಯದೆ ಶಿವಮಾದು ಸಹಾಯ ಮಾಡಲು ವಾಪಸ್ಸು ಬಂದಿದ್ದಾರೆ.
Advertisement
ಒಡವೆ ಅಡವಿಟ್ಟು ತಂದ ಹಣ ಸಿನಿಮೀಯ ರೀತಿಯಲ್ಲಿ ದರೋಡೆ
05:53 PM Mar 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.