Advertisement

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಅಗತ್ಯವಿದೆ: ಚುಂಚಶ್ರೀ

09:01 PM Oct 13, 2022 | Team Udayavani |

ಮಂಡ್ಯ: ಸಂವಿಧಾನದ ಪ್ರಕಾರ ಶೇ.50 ಮೀಸಲಾತಿಗಿಂತ ಹೆಚ್ಚು ನೀಡಬಾರದು ಎಂಬ ನಿಯಮವಿತ್ತು. ಆದರೆ ಆಳುವ ಸರ್ಕಾರಗಳು ಅದನ್ನು ಸಡಿಲಿಸಿದ್ದರಿಂದ ನಮ್ಮ ಒಕ್ಕಲಿಗ ಸಮುದಾಯಕ್ಕೂ ಶೇ.4 ಕ್ಕಿಂತ ಹೆಚ್ಚು ಮೀಸಲಾತಿ ನೀಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದ ಕಲಾಮಂದಿರದಲ್ಲಿ ನಡೆದ ಜಿಲ್ಲಾ ಒಕ್ಕಲಿಗರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬೇರೆ ಸಮುದಾಯಕ್ಕೆ ಹೆಚ್ಚು ಮೀಸಲಾತಿ ನೀಡಿರುವುದಕ್ಕೆ ನಮಗೆ ಬೇಸರವಿಲ್ಲ. ಆದರೆ ಹಿಂದಿನಿಂದಲೂ ಒಕ್ಕಲಿಗ ಸಮುದಾಯಕ್ಕೆ ಶೇ.4ಗಿಂತ ಹೆಚ್ಚಿನ ಮೀಸಲಾತಿ ನೀಡಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು. ದೇಶದ ಸಂವಿಧಾನದಂತೆ ಶೇ.50  ಮೀಸಲಾತಿ ಇತ್ತು. ಅದನ್ನು ಕದಲಿಸಬಾರದು ಎಂಬ ನಿಯಮವಿದ್ದರಿಂದ ನಮ್ಮವರಿಗೆ ತಿಳಿ ಹೇಳುತ್ತಿದ್ದೆವು. ನಾವು ಕಾನೂನನ್ನು ಗೌರವಿಸುತ್ತಾ ಬಂದಿದ್ದೆವು. ಆದರೆ ಈಗ ಕಳೆದ ವಾರ ಸರ್ಕಾರ ಸಂವಿಧಾನದ ಪ್ರಕಾರ ಇದ್ದ ಶೇ.50  ಮೀಸಲಾತಿಯನ್ನು ಸಡಿಲಿಸಿದ್ದಾರೆ. ಶೇ.50ರಷ್ಟು ಮೀಸಲಾತಿಗಿಂತ ಹೆಚ್ಚು ಕೊಡುವುದಾದರೆ ನಮ್ಮ ಸಮುದಾಯಕ್ಕೆ ಶೇ.4 ಕ್ಕಿಂತ  ಹೆಚ್ಚು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next