Advertisement

Vijayanagara: ಪಲ್ಟಿಯಾದ ಎಣ್ಣೆ ತುಂಬಿದ್ದ ಲಾರಿ; ಮುಗಿಬಿದ್ದ ಜನತೆ

12:30 PM Oct 15, 2023 | Team Udayavani |

ವಿಜಯನಗರ (ಕಾನಾಹೊಸಹಳ್ಳ): ಜಿಲ್ಲೆಯ ಸಮೀಪದ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅರಳೆಣ್ಣೆ ತುಂಬಿದ್ದ ಲಾರಿ ಭಾನುವಾರ ಪಲ್ಟಿಯಾಗಿದ್ದು, ಎಣ್ಣೆ ಕೊಂಡೊಯ್ಯಲು ಜನತೆ ಮುಗಿ ಬಿದ್ದಿದ್ದಾರೆ.

Advertisement

ತಮಿಳುನಾಡಿನಿಂದ ಗುಜರಾತ್ ಗೆ ಹೊರಟ್ಟಿದ್ದ ಎಣ್ಣೆ ತುಂಬಿದ್ದ ಲಾರಿ ಪಲ್ಟಿಯಾಗಿದ್ದರಿಂದ ಎಣ್ಣೆ ತುಂಬಲು ಜನತೆ ಮುಗಿಬಿದ್ದಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಅಪಘಾತದಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಕಾನಾಹೊಸಹಳ್ಳಿ ಪಿಎಸ್ಐ ಎರಿಯಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next