Advertisement

ವಿಸ್ತರಿಸುತ್ತಿರುವ ತೈಲ ಜಿಡ್ಡು; ಪ್ರವಾಸೋದ್ಯಮಕ್ಕೆ ಹಿನ್ನಡೆ

10:27 AM May 30, 2019 | keerthan |

ಮಲ್ಪೆ/ಕೋಟ: ಸಸಿಹಿತ್ಲು, ಕಾಪು ಮುಂತಾದೆಡೆ ಕಡಲ ತೀರದಲ್ಲಿ ಕಂಡುಬರುತ್ತಿರುವ ಕಪ್ಪು ಬಣ್ಣದ ತೈಲಜಿಡ್ಡಿನ ಉಂಡೆಗಳು ಮಲ್ಪೆ, ಮಣೂರು -ಪಡುಕರೆ ಮತ್ತು ಕೋಡಿಕನ್ಯಾಣ ತೀರದಲ್ಲೂ ಪತ್ತೆಯಾಗಿವೆ.

Advertisement

ಕೋಡಿ ಕನ್ಯಾಣದಿಂದ ಬೀಜಾಡಿ ತನಕ ಕಡಲ ತೀರದಲ್ಲಿ ಇದು ಕಂಡುಬಂದಿದೆ. ಸೈಂಟ್‌ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್‌ನಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ 2-3 ದಿನಗಳಿಂದ ತೇಲಿ ಬರುತ್ತಿದ್ದು, ಬುಧವಾರವೂ ಮುಂದುವರಿದಿದೆ. ಮಲ್ಪೆಯಲ್ಲಿ ಶೇಖರಗೊಂಡಿರುವ 50 ಕೆ.ಜಿ.ಯಷ್ಟು ಡಾಮರು ಉಂಡೆ ಯಂತಹ ವಸ್ತುವನ್ನು ಮಲ್ಪೆ ಅಭಿವೃದ್ಧಿ ಸಮಿತಿ ತೆರವು ಮಾಡಿ ಸ್ವತ್ಛಗೊಳಿಸಿದೆ.

ಹಡಗುಗಳಿಂದ ಸಾಕಷ್ಟು ದೂರ ಆಳ ಸಮುದ್ರದಲ್ಲಿ ತೈಲ ವಿಸರ್ಜನೆ ಯಾಗಿದ್ದರಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ತ್ಯಾಜ್ಯ ಕಡಲತೀರವನ್ನು ಪಸರಿಸಿದೆ. ತೀರಕ್ಕೆ ಸಮೀಪ ಇದು ನಡೆದಿದ್ದರೆ ಹತ್ತಿರದ ಸ್ಥಳಗಳಲ್ಲಿ ಮಾತ್ರ ಕಂಡುಬರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತೀರವಾಸಿಗಳು.

ಕಡಲಾಮೆಗಳಿಗೆ ಆಪತ್ತು?
ಈ ಕಲ್ಮಶದಿಂದ ಮೀನುಗಾರಿಕೆಗೆ ಸಮಸ್ಯೆಯಾಗುತ್ತದೆ ಮತ್ತು ಕಡಲಾಮೆಗಳು ಸಾವನ್ನಪ್ಪುವ ಸಾಧ್ಯತೆ ಇದೆ. ಎಪ್ರಿಲ್‌, ಮೇ ತಿಂಗಳಲ್ಲಿ ಸಮುದ್ರದ ತೀರಪ್ರದೇಶದಲ್ಲಿ ಮೀನಿನ ಕೊರತೆಯಿಂದಾಗಿ ಮೀನುಗಾರರು ತೀವ್ರ ಸಂಕಷ್ಟವನ್ನು ಅನುಭವಿಸಿದ್ದಾರೆ. .

ಪ್ರವಾಸೋದ್ಯಮಕ್ಕೆ ಹಿನ್ನಡೆ
ಕಳೆದ ವರ್ಷವೂ ಒಂದೆರಡು ಬಾರಿ ಇದೇ ರೀತಿಯ ಜಿಡ್ಡು ಸಮುದ್ರದಲ್ಲಿ ಕಾಣಿಸಿಕೊಂಡಿತ್ತು. ಈ ಸಲ ಹಲವಾರು ಬಾರಿ ಪುನರಾವರ್ತನೆಯಾಗಿದೆ. ಸೈಂಟ್‌ ಮೇರಿ ದ್ವೀಪದಂತಹ ಕಡೆ ಈ ರೀತಿ ತ್ಯಾಜ್ಯ ಕಂಡುಬರುವುದು ಪ್ರವಾಸೋದ್ಯಮದ ಹಿನ್ನಡೆಗೆ ಕಾರಣವಾಗುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಮಲ್ಪೆ ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಆಗ್ರಹಿಸಿದ್ದಾರೆ.

Advertisement

ಸ್ಥಳೀಯ ಸಮಸ್ಯೆ ಅಲ್ಲ: ಡಿಸಿ
ಮಂಗಳೂರು: ಸಮುದ್ರದಲ್ಲಿ ತೈಲ ಜಿಡ್ಡು ಮುಂಗಾರು ಮಳೆ ಆರಂಭವಾಗುವ ವೇಳೆ ಪಶ್ಚಿಮ ಕರಾವಳಿ ಉದ್ದಕ್ಕೂ ಕಂಡು ಬರುತ್ತಿದೆ. ಅದು ಕೇವಲ ಮಂಗಳೂರು ಕರಾವಳಿಗೆ ಸೀಮಿತವಾದ ಸಮಸ್ಯೆ ಅಲ್ಲ ಎಂದು ದ. ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next