Advertisement

ಸೌದಿ ಬಿಕ್ಕಟ್ಟಿನಿಂದ ಸಮಸ್ಯೆ ಇಲ್ಲ: ದಾಸ್‌

10:26 AM Sep 21, 2019 | Team Udayavani |

ಮುಂಬಯಿ/ಲಂಡನ್‌: ಸೌದಿ ಅರೇಬಿಯಾದ ಬೆಳವಣಿಗೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆ ಯಾಗು ತ್ತಿರುವುದು ದೇಶದ ಹಣದುಬ್ಬರದ ಮೇಲೆ ಪರಿಣಾಮ ಬೀರದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

Advertisement

ಹಣದುಬ್ಬರ ಏರಿಕೆಯಾಗುವ ಆತಂಕದ ನಡುವೆ ಅವರು ಈ ಭರವಸೆ ನೀಡಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಅರಾಮೊ ತೈಲ ಸಂಸ್ಕರಣ ಘಟಕದ ಮೇಲಿನ ದಾಳಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಏರಿಕೆಯ ಆತಂಕ ಮುಂದುವರಿದಿದೆ. ಗುರುವಾರ ಮತ್ತೆ ಕಚ್ಚಾ ತೈಲ ದರದಲ್ಲಿ ಏರಿಕೆಯಾಗಿದ್ದು, ಬ್ರೆಂಟ್‌ ತೈಲದ ದರ ಶೇ.2ರಷ್ಟು ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next