Advertisement

ತೈಲ ಬೆಲೆ ಏರಿಕೆ ಸೂಚನೆ: ನಾಗರಿಕರ ಹಿತದೃಷ್ಟಿಯಿಂದ ನಿರ್ಧಾರ; ಪೆಟ್ರೋಲಿಯಂ ಸಚಿವ

07:31 PM Mar 08, 2022 | Team Udayavani |

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ದೇಶದಲ್ಲಿ ತೈಲ ಬೆಲೆ ಭಾರಿ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಇದ್ದು,ನಾಗರಿಕರ ಹಿತದೃಷ್ಟಿಯಿಂದ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ ನೀಡಿದ್ದಾರೆ.

Advertisement

ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ. ಜಗತ್ತಿನ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ತೈಲ ಕಂಪನಿಗಳು ಇದಕ್ಕೆ ಗುರಿಯಾಗುತ್ತವೆ ಎಂದಿದ್ದಾರೆ.

ಮೂಲಗಳನ್ನು ಉಲ್ಲೇಖಿಸಿ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 5-6 ರೂ ದರವನ್ನು ಹೆಚ್ಚಿಸಲು ಕ್ರಮೇಣ ಅನುಮತಿಸಬಹುದು ಎಂದು ಸುದ್ದಿಯಾಗಿತ್ತು. ಇಂತಹ ಸುದ್ದಿಯ ನಂತರ, ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸೋಮವಾರ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 139 ಡಾಲರನ್ನು ದಾಟಿದೆ. ಇದು ಜುಲೈ 2008 ರಿಂದ ಗರಿಷ್ಠ ಮಟ್ಟವಾಗಿದೆ. ಆದರೆ, ಮಂಗಳವಾರ ಕಚ್ಚಾ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವಂತೆ ಕಂಪನಿಗಳ ಮೇಲೆ ಒತ್ತಡವಿದೆ. ಪ್ರಸ್ತುತ ಕಂಪನಿಗಳು ಲೀಟರ್‌ಗೆ 12 ರೂ.ಗಿಂತ ಕಡಿಮೆ ತೈಲವನ್ನು ಮಾರಾಟ ಮಾಡಬೇಕಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next