Advertisement

ಬೀದಿಬೀದಿಗೆ ಅಧಿಕಾರಿಗಳ ಭೇಟಿ-ಅಹವಾಲು ಸ್ವೀಕಾರ

02:15 PM Apr 17, 2022 | Team Udayavani |

ಬೈಲಹೊಂಗಲ: ತಾಲೂಕಿನ ಮುರಕಿಭಾವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಹಶೀಲ್ದಾರ್‌ ಬಸವರಾಜ ನಾಗರಾಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರತಿ ಬೀದಿಗಳಿಗೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

Advertisement

ಮನೆ ಬಿದ್ದಿರುವುದು, ವಿದ್ಯುತ್‌ ಅಭಾವ, ಟಿಸಿ ಬದಲಾವಣೆ, ಹಕ್ಕು ಪತ್ರ ಬದಲಾವಣೆ, ಗ್ರಾಮದ ಅಸ್ವತ್ಛತೆ ಮೊದಲಾದ ಸಮಸ್ಯೆ ಕುರಿತು ಜನರು ತಹಶೀಲ್ದಾರ್‌ ಗಮನಸೆಳೆದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ 40 ಜನರಿಗೆ ಮಾಶಾಸನ ನೀಡಲಾಯಿತು.

ಸುಮಾರು 63 ಸಮಸ್ಯೆಗಳ ಕುರಿತು ನಾಗರಿಕರು ಅರ್ಜಿ ಸಲ್ಲಿಸಿದ್ದರು. ಆರೋಗ್ಯ ಇಲಾಖೆಯಿಂದ 10 ಜನರಿಗೆ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ವಿತರಿಸಿ, ಆರೋಗ್ಯ ತಪಾಸಣೆ ನಡೆಸಲಾಯಿತು. ಕೃಷಿ ಇಲಾಖೆಯಿಂದ ಇಬ್ಬರು ರೈತರಿಗೆ ತುಂತುರು ನೀರಾವರಿ ಸಲಕರಣೆ ಹಾಗೂ ಮೈಕ್ರೋ ನ್ಯೂಟ್ರಿಯಂಟ್‌ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10 ಜನರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಪ್ರಮಾಣ ಪತ್ರ ಹಂಚಲಾಯಿತು. ಮಕ್ಕಳ ಹುಟ್ಟುಹಬ್ಬ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಪೋಷಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

Advertisement

ತಹಶೀಲ್ದಾರ್‌ ಬಸವರಾಜ ನಾಗರಾಳ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಕಷ್ಟಗಳಾದವು. ಗ್ರಾಮದಲ್ಲಿ ಆಗಬೇಕಾದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು. ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಬೇಕೆಂದರು.

ಗ್ರಾಪಂ ಅಧ್ಯಕ್ಷೆ ಅನಸೂಯಾ ತಳವಾರ, ಉಪಾಧ್ಯಕ್ಷೆ ರೂಪಾ ಹೊಸಮನಿ, ಆರ್‌ .ಎ. ಪಾಟೀಲ, ಸದಸ್ಯರಾದ ಶಿವಾನಂದ ಪಾಟೀಲ, ನಾಗಮ್ಮ ಪಾಟೀಲ, ಅಡಿವೆಪ್ಪ ಮೋದಗಿ, ಯಲ್ಲನಗೌಡ ದೊಡ್ಡಗೌಡರ, ಗಂಗಪ್ಪ ಸಂಗಮ್ಮನವರ, ತಾ.ಪಂ ಇಒ ಸುಭಾಸ ಸಂಪಗಾವಿ, ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಬಿಇಒ ಎ.ಎನ್‌. ಪ್ಯಾಟಿ, ಕೃಷಿ ಇಲಾಖೆ ಅಧಿಕಾರಿಗಳಾದ ರುದ್ರಪ್ಪ ಕುಂಬಾರ, ಬಿ.ಎಸ್‌. ಚಿಕ್ಕಮಠ, ಎಇಇ ಎಸ್‌. ಕೆ. ಮೂಗಸಜ್ಜಿ, ಕೆಇಬಿ ಎ.ಇ. ಅಣ್ಣಪ್ಪ ಲಮಾಣಿ, ಉಪ ತಹಶೀಲ್ದಾರ್‌ ಬಸವರಾಜ ಹುಬ್ಬಳ್ಳಿ, ವೃತ್ತ ನಿರೀಕ್ಷಕ ಬಸವರಾಜ ಬೊರಗಲ್ಲ, ಪಿಡಿಒ ರಮೇಶ ನಂದಿಹಳ್ಳಿ, ಗ್ರಾಮ ಲೆಕ್ಕಾಧಿಕಾರಿಗಳಾದ ರಾಮಚಂದ್ರ ನಾಯಕ, ಶಿವಾನಂದ ಕರಿಗಾರ, ಮಹಾಂತೇಶ ಕೊಣೀನವರ, ಜಗದೀಶ ಗೌಡರ, ಡಾ| ಬಸವಣೆಪ್ಪ ಕುರಗುಂದ, ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಎ.ಎಸ್‌. ಉಳವಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕಾಂತ ಉಡಕೇರಿ ಸ್ವಾಗತಿಸಿದರು. ಬಸವರಾಜ ಕೆರಕನ್ನವರ ನಿರೂಪಿಸಿದರು. ಅರ್ಜುನ ಕೋಣಿನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next