Advertisement

ಉದಯವಾಣಿ ವರದಿ ಫಲಶ್ರುತಿ: ಸೀಲ್ ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ಜಾರಿ

08:04 PM Jul 01, 2020 | Hari Prasad |

ಚಾಮರಾಜನಗರ: ಸೀಲ್‌ಡೌನ್ ಆಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದ ನಗರದ ಭ್ರಮರಾಂಬ ಬಡಾವಣೆ 6ನೇ ಕ್ರಾಸಿನಲ್ಲಿ, ಉದಯವಾಣಿ ವರದಿಯಿಂದ ಎಚ್ಚೆತ್ತು ಗುರುವಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Advertisement

ಸೀಲ್‌ಡೌನ್ ಆದ ಪ್ರದೇಶದಲ್ಲಿ ಓರ್ವ ಉಸ್ತುವಾರಿ ಅಧಿಕಾರಿ ಇದ್ದು ಆ ಪ್ರದೇಶದ ಜನರ ಅಗತ್ಯತೆಗಳ ಬಗ್ಗೆ ನಿಗಾ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಇರಬೇಕು. ಪೊಲೀಸರ ಕಾವಲು ಇರಬೇಕು. ಆದರೆ, ಮಂಗಳವಾರ ಯಾರೂ ಇಲ್ಲದೇ ಬ್ಯಾರಿಕೇಡ್ ಮಾತ್ರ ನೆಪಕ್ಕೆ ಇತ್ತು. ಈ ಕುರಿತು ಉದಯವಾಣಿಯಲ್ಲಿ ಬುಧವಾರ ವರದಿ ಪ್ರಕಟವಾಗಿತ್ತು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ಸ್ಥಳದಲ್ಲಿ ಓರ್ವ ಉಸ್ತುವಾರಿ ಅಧಿಕಾರಿಯನ್ನು ನೇಮಿಸಿ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದರು. ನಗರಸಭೆಯಿಂದ ಆ ರಸ್ತೆಯನ್ನು ಸ್ಯಾನಿಟೈಸ್ ಮಾಡಲಾಯಿತು. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next