Advertisement

ಬಿಸ್ವಾಸ್ ಬರುವ ಮುನ್ನವೇ ಬಿಮ್ಸ್‌ನೊಳಗೆ ಅಧಿಕಾರಿಗಳ ಭೇಟಿ

08:02 PM Jun 07, 2021 | Team Udayavani |

ಬೆಳಗಾವಿ: ಅವ್ಯವಸ್ಥೆಯಿಂದ ಕೂಡಿರುವ ಇಲ್ಲಿಯ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಲ್ಲಾಸ್ಪತ್ರೆ)ಗೇ ಶಸ್ತ್ರಚಿಕಿತ್ಸೆ ಮಾಡಲು ಆಡಳಿತಾಧಿಕಾರಿಯಾಗಿ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅವರು ನೇಮಕಗೊಂಡಿದ್ದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ರವಿವಾರ ಆಸ್ಪತ್ರೆಯೊಳಗೆ ರೌಂಡ್ಸ್‌ ಹಾಕಿ ಪರಿಶೀಲನೆ ನಡೆಸಿದರು.

Advertisement

ಬಿಮ್ಸ್‌ನಲ್ಲಿ ಅವ್ಯವಸ್ಥೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಬಿಮ್ಸ್‌ ಸುಧಾರಣೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಆಡಳಿತಾ ಧಿಕಾರಿಯನ್ನಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿರುವ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ಬಳಿಕ ಬಿಸ್ವಾಸ್‌ ಸೋಮವಾರ ಜೂ.7ರಂದು ಆಸ್ಪತ್ರೆಗೆ ಬಂದು ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರವಿವಾರ ಬಿಮ್ಸ್‌ನ ಕೋವಿಡ್‌ ವಾರ್ಡ್‌ ಸೇರಿ ಎಲ್ಲ ಕಡೆಗೂ ಅಧಿಕಾರಿಗಳು ಪಿಪಿಇ ಕಿಟ್‌ ಧರಿಸಿಕೊಂಡು ಸುತ್ತು ಹಾಕಿದರು. ಕೋವಿಡ್‌ ವಾರ್ಡ್‌ನಲ್ಲಿ ಸೋಂಕಿತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ವಾರ್ಡ್‌ನಲ್ಲಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿನೆ ನಡೆಸಿದರು.

ಭೀಮ್ಸ್‌ ಪ್ರಭಾರಿ ನಿರ್ದೇಶಕ ಡಾ| ಉಮೇಶ ಕುಲಕರ್ಣಿ, ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಳ್ಳಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುಧಾಕರ, ವೈದ್ಯಕೀಯ ಅಧೀಕ್ಷಕ ಡಾ. ದಂಡಗಿ ಸೇರಿದಂತೆ ಬಿಮ್ಸ್‌ನ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next