Advertisement
ವಲಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಸ್.ಯು. ಪಟೇಲ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಧನಂಜಯ, ವಿಜ್ಞಾನಿಗಳಾದ ಡಾ| ಸುಧೀರ್ ಕಾಮತ್, ಡಾ| ಜಯಪ್ರಕಾಶ್, ಕುಂದಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ವೃಂದಾ ಭಟ್, ರೈತರು ಮತ್ತಿತರರು ಉಪಸ್ಥಿತರಿದ್ದರು.
ಕಳೆ ಗಿಡಗಳನ್ನು ಕಿತ್ತು ಅಲ್ಲಿಯೇ ಒಂದು ಕಡೆ ರಾಶಿ ಹಾಕಿದ್ದು, ಅದನ್ನು ಸುಡಬೇಕು. ರಾಶಿ ಹಾಕಿದ್ದರಿಂದ ಎಲ್ಲೆಡೆ ಹರಡಿದೆ. ಈಗಾಗಲೇ ಕೃಷಿ ವಿಜ್ಞಾನಿಗಳು ಅಧ್ಯಯನಕ್ಕೆಂದು ಸ್ಯಾಂಪಲ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದರ ವರದಿ ಬಂದ ಬಳಿಕ ಪರಿಹಾರ ಕಂಡು ಹುಡುಕಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ ಹೇಳಿದ್ದಾರೆ. ಪರಿಹಾರಕ್ಕೆ ಆಗ್ರಹ
ಕಳೆ ಗಿಡ ಬೆಳೆದಿರುವುದು ಬಿತ್ತನೆ ಬೀಜದಿಂದ ಎನ್ನುವ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ವಾದವನ್ನು ತಿರಸ್ಕರಿಸಿದ ರೈತರು, ಈ ಭಾಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಳೆ ಗಿಡ ಬೆಳೆದಿದೆ. ಇದು ಬಿತ್ತನೆ ಬೀಜದಿಂದಾಗಿರುವುದು ಅಲ್ಲ. ಸೂಕ್ತ ಪರಿಹಾರ ನೀಡಬೇಕು ಎಂದು ಅಲ್ಲಿ ಸೇರಿದ್ದ ರೈತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.