Advertisement

ಅಧಿಕಾರಿ ವರ್ಗವಿರುವುದು ಸುಲಿಗೆಗಾಗಿ ಅಲ್ಲ: ರಾಮಚಂದ್ರ

02:45 AM Jul 11, 2017 | Team Udayavani |

ಪುತ್ತೂರು : ಇಲ್ಲಿನ ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್‌ ಹಾಗೂ ವಿವೇಕಾನಂದ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಟಿ ವೃಕ್ಷ ಅಭಿಯಾನ ಪ್ರಯುಕ್ತ ವೃûಾರೋಪಣ ಹಾಗೂ 3ನೇ ವರ್ಷದ ಯಶಸ್‌ ತರಗತಿಗಳ ಪ್ರಾರಂಭೋತ್ಸವ ವಿವೇಕಾನಂದ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ. ರಾಮಚಂದ್ರ, ಆಡಳಿತ ಸೇವೆಯ ಅಧಿಕಾರಿಗಳಾಗುವುದು ಸುಲಭದ ಮಾತಲ್ಲ. ಪ್ರತಿ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳ ಯಶಸ್ಸಿನ ಹಿಂದೆ ಹಲವು ವರ್ಷಗಳ ಪರಿಶ್ರಮವಿದೆ. ಒಂದು ಬಾರಿ ಆಡಳಿತಾಧಿಕಾರಿಯಾಗಿ ಆಯ್ಕೆಯಾದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು. ನಮ್ಮ ಕಾರ್ಯ ಸಾಧನೆಯ ಗುರಿ ಏನಾಗಿತ್ತು ಎಂಬುದನ್ನು ಅವಗಣಿಸಬಾರದು ಎಂದು ನುಡಿದರು.

ಅಧಿಕಾರಿ ವರ್ಗ ಆಯ್ಕೆಯಾಗುವುದು ಜನರ ಸೇವೆಗಾಗಿ, ಸುಲಿಗೆಗಾಗಿ ಅಲ್ಲ.  ಆಸೆ ಆಮಿಷಗಳಿಗೆ ಬಲಿಯಾಗಬಾರದು. ಜನಸಾಮಾನ್ಯನಿಗೆ ತನ್ನ ಕೆಲಸ ಮಾಡಿಸಿಕೊಳ್ಳುವುದಕ್ಕೆಂದು ಅನಗತ್ಯವಾಗಿ ಅಲೆದಾಡಬೇಕಾದ ಪರಿಸ್ಥಿತಿ ತಂದೊಡ್ಡುವುದು ತರವಲ್ಲ. ಗುರಿಯ ಹಿಂದೆ ಒಳ್ಳೆಯ ಉದ್ದೇಶ ಇರಿಸಿಕೊಳ್ಳಬೇಕು. ಹಣ ಗಳಿಸುವುದೇ ಉದ್ಯೋಗದ ಉದ್ದೇಶವಾಗಿಬಿಟ್ಟರೆ ಸಮಾಜಸೇವೆಯ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾ ಧೀಶ ಮತ್ತು ಪ್ರÅಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾ|ಮೂ| ಸಿ.ಕೆ.ಬಸವರಾಜ್‌, ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್‌ ಅನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್‌ ಮಾತನಾಡಿ, ಗುರಿಯ ಹಾದಿಯಲ್ಲಿ ಕಷ್ಟ ಪಡಲೇಬೇಕು. ಶ್ರೀಮಂತರು ತಮ್ಮ ಪ್ರಭಾವ ಬಳಸಿ ಹೇಗೋ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳುತ್ತಾರೆ. ಆದರೆ ಬಡವರು ಅಧಿಕಾರಿಗಳನ್ನೇ ನಂಬಿಕೊಂಡಿರುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ನುಡಿದರು.

Advertisement

ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಾಹಿತಿ ಡಾ| ತಾಳ್ತಜೆ ವಸಂತ ಕುಮಾರ್‌ ಹಾಗೂ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಯಶಸ್‌ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಧಾನ ವ್ಯಾವಹಾರಿಕಾ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾ| ಮೂ| ಪ್ರಕಾಶ್‌ ಪಿ.ಎಂ. ಮೊದಲಾದವರು ಉಪಸ್ಥಿತರಿದ್ದರು.

ಯಶಸ್‌ ವಿದ್ಯಾರ್ಥಿನಿಯರಾದ ಅಂಶಿಕಾ ಹಾಗೂ ಮೈಥಿಲಿ ಪ್ರಾರ್ಥಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್‌ ಕಾರ್ಯದರ್ಶಿ ಮುರಳಿಕೃಷ್ಣ ಕೆ. ಎನ್‌ ಸ್ವಾಗತಿಸಿ, ಸದಸ್ಯೆ ವಿದ್ಯಾಗೌರಿ ವಂದಿಸಿದರು. ಉಪನ್ಯಾಸಕಿ ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

ಯುವಜನತೆ ಅವಕಾಶ ಸರಿಯಾಗಿ ಬಳಸಿಕೊಳ್ಳಲಿ
ನಮ್ಮದು ಸ್ವತಂತ್ರ ಭಾರತ. ಎಲ್ಲವೂ ಸಂವಿಧಾನದಲ್ಲಿ ಸೂಚಿಸಿದಂತೆ ನಡೆಯಲ್ಪಡುತ್ತದೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಅನೇಕ ರೀತಿಯಲ್ಲಿ ಮೀಸಲಾತಿ ನೀಡಲ್ಪಟ್ಟಿದೆ. ಸಿಕ್ಕ ಅವಕಾಶಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಅಪರಾಧ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿ ಆಗಬೇಕು ಎಂದು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಾ|ಮೂ| ಮಂಜುನಾಥ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next