Advertisement

ಕಬಿನಿ ಜಲಾಶಯಕ್ಕೆ ಕಚೇರಿ ಮುತ್ತಿಗೆ

11:47 AM Jul 01, 2017 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ಕಬಿನಿ ಜಲಾಶಯ ತುಂಬುವ ಮುನ್ನವೆ ತಮಿಳುನಾಡಿಗೆ 2 ಸಾವಿರಗೂ ಹೆಚ್ಚು ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರುಗಳು ಕಬಿನಿ ಜಲಾಶಯದ ಕಚೇರಿಗೆ ಮುತ್ತಿಗೆ ಹಾಕಿ ಜಲಾಶಯದ ನೀರನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರು ಮಾತನಾಡಿ, ಜಲಾಶಯದಲ್ಲಿ ಈಗ ಕೇವಲ 60 ಅಡಿಗಳಷ್ಟು ಮಾತ್ರ ನೀರು ಸಂಗ್ರಹವಿದ್ದು, ಭರ್ತಿಯಾಗಲು ಇನ್ನೂ 25 ಅಡಿ ನೀರಿನ ಕೊರತೆ ಎದುರಿಸುತ್ತಿದೆ, ಇನ್ನೂ  ಜಲಾಶಯಕ್ಕೆ ಒಳ ಹರಿವು ಕೂಡ 6 ಸಾವಿರ ಕ್ಯುಸೆಕ್‌ ಹರಿದು ಬರುತ್ತಿದ್ದು, ಮಳೆ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದರು. 

ಈ ಭಾಗದ ರೈತರು ಜಲಾಶಯ ಇನ್ನೂ ಭರ್ತಿಯಾಗದೆ ಅತಂತ್ರದಲ್ಲಿದ್ದು ಇಂತಹ ಸಂದರ್ಭದಲ್ಲಿ ರೈತರ ಹಿತಕಾಯಬೇಕಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಹಿತಕ್ಕಾಗಿ ಸುಭಾಷ್‌ ವಿದ್ಯುತ್‌ ಘಟಕದ ಮೂಲಕ ನೀರು ಹೊರ ಬಿಟ್ಟಿರುವುದು ಸರಿಯಲ್ಲ ಎಂದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಬಿನಿ ಶಿವಲಿಂಗ, ರಘು, ಬಸ್ಸು, ಕೇಶವ, ಆಕಾಶ್‌, ಶಿವರಾಮ್‌, ರಾಜೇಶ್‌, ಗಣೇಶ್‌ ಪ್ರಸಾದ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next