Advertisement

ಸಾವಿಗೆ ಕಾರಣನಾದರೂ ಯುವಕನಿಗೆ ಜೈಲು ಶಿಕ್ಷೆ ಇಲ್ಲ

10:07 AM Jan 10, 2020 | Hari Prasad |

ಹೊಸದಿಲ್ಲಿ: 2016ರಲ್ಲಿ ಮರ್ಸಿಡಿಸ್‌ ಹತ್ತಿಸಿ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣನಾದ ಯುವಕನಿಗೆ ಒಂದು ದಿನವೂ ಸೆರೆವಾಸ ವಿಧಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ದೃಢಪಡಿಸಿದೆ.

Advertisement

ಯುವಕ ತನ್ನ ಅಪ್ಪನ ಕಾರನ್ನು ಚಲಾಯಿಸಿ ಅಪಘಾತ ಎಸಗಿದ್ದ. ಆಗ ಆತನಿಗೆ 18 ವರ್ಷ ತುಂಬಲು 4 ದಿನವಷ್ಟೇ ಬಾಕಿ ಇತ್ತು. ಆತನಿಗೆ 18 ವರ್ಷ ತುಂಬಿರದ ಕಾರಣ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಅಪರಾಧದ ಮೇರೆಗೆ ಆತನಿಂದ ಮೂರು ಬಾರಿ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂದು ಕೋರ್ಟ್‌ ಹೇಳಿದೆ. ಈ ಮೊಕದ್ದಮೆ ಬಾಲಾಪರಾಧ ಕಾಯ್ದೆ ಅಡಿ ಅಮಾನುಷ ಅಪರಾಧ ಎಂದು ಕರೆಸಿಕೊಳ್ಳುವುದಿಲ್ಲ ಎಂದೂ ನ್ಯಾ. ದೀಪಕ್‌ ಗುಪ್ತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next