Advertisement

ಶ್ರೀ ಕ್ಷೇತ್ರ ಒಡಿಯೂರು:ಉದ್ಯಮಿ ವಾಮಯ್ಯ ಶೆಟ್ಟಿ ದಂಪತಿಗೆ ಸಮ್ಮಾನ

03:46 PM Feb 19, 2019 | |

ಪುಣೆ: ಶ್ರೀ  ಕ್ಷೇತ್ರ ಕಟೀಲು ಮತ್ತು ಶ್ರೀ  ಕ್ಷೇತ್ರ ಒಡಿಯೂರಿನ ಗುರುದೇವದತ್ತ ಸಂಸ್ಥಾನದ ಪರಮಭಕ್ತರಲ್ಲಿ ಒಬ್ಬರಾದ, ಒಡಿಯೂರು  ಗ್ರಾಮೋತ್ಸವ ಸಮಿತಿ ಮುಂಬಯಿ ಘಟಕದ ಅಧ್ಯಕ್ಷ, ಮುಂಬಯಿ ಉದ್ಯಮಿ ವಾಮಯ್ಯ ಶೆಟ್ಟಿ ಮತ್ತು ರೇವತಿ ವಾಮಯ್ಯ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.

Advertisement

ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವದಿಸಿ ಸಮ್ಮಾನಿಸಿದರು. ವಾಮಯ್ಯ ಶೆಟ್ಟಿ  ದಂಪತಿ  ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಶ್ರೀ ದತ್ತಾಂಜನೇಯ ದೇವರ ಪೂಜೆ ನೆರವೇರಿಸಿದರು. ಕ್ಷೇತ್ರದ ವಾರ್ಷಿಕೋತ್ಸವದ  ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು  ವಾಮಯ್ಯ ಶೆಟ್ಟಿ ದಂಪತಿ ಮಂತ್ರಾಕ್ಷತೆ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ   ಸಾಧ್ವಿ  ಶ್ರೀ ಮಾತಾನಂದಮಯಿ, ಶ್ರೀಗಳ ಮಾತೃಶ್ರೀಯವರು, ವಾಮಯ್ಯ ಶೆಟ್ಟಿ ದಂಪತಿ, ವಾಮನ್‌ ಶೆಟ್ಟಿ ಅವರ ಪುತ್ರಿ ವಂದನಾ ಆರ್‌. ಶೆಟ್ಟಿ, ಅಳಿಯ ರವಿ ಶೆಟ್ಟಿ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ದಂಪತಿ, ಗೌರವ ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಪೇಟೆಮನೆ, ಪುಣೆ ಶ್ರೀ ಗುರುದೇವ ಸೇವಾ ಬಳಗದ  ಗೌರವ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು, ಡಾ| ಆದಿಪ್‌ ಶೆಟ್ಟಿ ಮುಂಬಯಿ  ಉಪಸ್ಥಿತರಿದ್ದರು.

 ವರದಿ :  ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next