Advertisement

ಒಡಿಶಾ ರಾಜ್ಯಪಾಲರಿಗೆ ಎದೆನೋವು; ಆಸ್ಪತ್ರೆಗೆ ದಾಖಲು

04:36 PM Oct 19, 2017 | Team Udayavani |

ಭುವನೇಶ್ವರ : ಒಡಿಶಾ ರಾಜ್ಯಪಾಲ ಎಸ್‌ ಸಿ ಜಮೀರ್‌ ಅವರಿಗೆ ಇಂದು ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ರಾಜಭವನದ ಮೂಲಗಳು ತಿಳಿಸಿವೆ.

Advertisement

ಜಮೀರ್‌ ಅವರ ದೇಹಸ್ಥಿತಿ ದೃಢವಾಗಿದೆ; ಆದರೂ ಅವರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ ಎಂದು ಹೃದ್ರೋಗ ತಜ್ಞ ಪಿ ಕೆ ಸಾಹು ಹೇಳಿದ್ದಾರೆ. ರಾಜ್ಯಪಾಲರ ಆರೋಗ್ಯದ ಬಗ್ಗೆ ಕಳವಳವೇನೂ ಇಲ್ಲ ಎಂದವರು ಹೇಳಿದರು.

1931ರ ಅಕ್ಟೋಬರ್‌ 17ರಂದು ಜನಿಸಿದ್ದ ಜಮೀರ್‌ ಅವರು ಮಹಾರಾಷ್ಟ್ರ ಮತ್ತು ಗೋವೆಯ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ  ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಚುನಾಯಿತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next