Advertisement

Odisha: ಕ್ಷಿಪಣಿ ಪರೀಕ್ಷೆ ನಡೆಸದಿರಿ: DRDO ಗೆ ಒಡಿಶಾ ಸರಕಾರ ಮನವಿ

11:55 PM Dec 09, 2023 | Team Udayavani |

ಭುವನೇಶ್ವರ್‌: ಅಳಿವಿನಂಚಿನಲ್ಲಿರುವ ಆಲಿವ್‌ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕವಾಗಿ ಗೂಡುಕಟ್ಟುವ ಋತುವಾದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಒಡಿಶಾ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆಗಳನ್ನು ನಡೆಸದಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಗೆ ಒಡಿಶಾ ಸರಕಾರ ಮನವಿ ಮಾಡಿದೆ.

Advertisement

ರಾಜ್ಯದ ಬಾಲಾಸೋರ್‌ ಜಿಲ್ಲೆಯ ಚಾಂದಿಪುರ್‌ ಹಾಗೂ ಭದ್ರಕ್‌ ಜಿಲ್ಲೆಯ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಲ್ಲಿ ಎರಡು ಪ್ರಮುಖ ಕ್ಷಿಪಣಿ ಪರೀಕ್ಷಾ ಪ್ರದೇಶಗಳನ್ನು ಡಿಆರ್‌ಡಿಒ ಹೊಂದಿದೆ. ಗರ್ಹೀಮಠ ಅಭಯಾರಣ್ಯ ಸಮೀಪದಲ್ಲಿ ಈ ಕ್ಷಿಪಣಿ ಪರೀಕ್ಷಾ ಪ್ರದೇಶಗಳಿವೆ. ಈ ಅಭಯಾರಣ್ಯದಲ್ಲಿ ಆಲಿವ್‌ ರಿಡ್ಲಿ ಸಮುದ್ರ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕ್ಷಿಪಣಿ ಪರೀಕ್ಷೆ ನಡೆಸದಂತೆ ಪ್ರತಿ ವರ್ಷ ಡಿಆರ್‌ಡಿಒಗೆ ಒಡಿಶಾ ಸರಕಾರ ಮನವಿ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next