Advertisement

Odisha; ಮಾಜಿ ಐಎಎಸ್‌ ಅಧಿಕಾರಿಗೆ ಒಲಿವುದೇ ಸಿಎಂ ಪಟ್ಟ?

12:03 AM Jun 08, 2024 | Team Udayavani |

ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದು, ಮಾಜಿ ಐಎಎಸ್‌ ಅಧಿಕಾರಿ ಯೊಬ್ಬರು ನೂತನ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಮಾಜಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಜುಯಲ್‌ ಓರಮ್‌ ಹೆಸರು ಸಿಎಂ ರೇಸ್‌ನಲ್ಲಿ ದ್ದವು. ಈ ಮಧ್ಯೆ, ಅಚ್ಚರಿ ಎಂಬಂತೆ, ಮಾಜಿ ಮಹಾಲೇಖಪಾಲ (ಸಿಎಜಿ) ಗಿರೀಶ್‌ ಚಂದ್ರ ಮುರ್ಮು ಹೆಸರೂ ಕೇಳಿ ಬಂದಿದೆ. ಗಿರೀಶ್‌ ಮಾಜಿ ಐಎಎಸ್‌ ಅಧಿಕಾರಿಯಾಗಿದ್ದು, ಜಮ್ಮು-ಕಾಶ್ಮೀರದ ಮೊದಲ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದರು.

Advertisement

ಪ್ರಧಾನಿ ಮೋದಿ ಸಿಎಂ ಆಗಿದ್ದಾಗ ಗುಜರಾತ್‌ನಲ್ಲಿ ಮುರ್ಮು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರಿಗೆ ಬಿಜೆಪಿ ಹೈಕಮಾಂಡ್‌ ಮಣೆ ಹಾಕಬಹುದು ಎಂದು ಹೇಳಲಾಗುತ್ತಿದೆ. ಒಡಿಶಾ ಸಿಎಂ ಪ್ರಮಾಣ ಸ್ವೀಕಾರವೂ ಜೂ.10ರಂದೇ ನಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next