Advertisement

Odisha; ಪಾದ್ರಿಗಳಿಗೆ ಹಲ್ಲೆ: ಚರ್ಚ್‌ನ 10 ಲಕ್ಷ ರೂ. ಲೂಟಿ

12:42 AM Jun 16, 2024 | Team Udayavani |

ಭುವನೇಶ್ವರ: ಒಡಿಶಾದ ಸುಂದರ್‌ಗಢ ಜಿಲ್ಲೆಯ ಚರ್ಚ್‌ ಒಂದರಲ್ಲಿ ಇಬ್ಬರು ಪಾದ್ರಿಗಳ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದು, 10 ಲಕ್ಷ ರೂ. ಲೂಟಿ ಮಾಡಿದ್ದಾರೆ ಎಂದು ಶನಿವಾರ ಪೊಲೀಸರು ಹೇಳಿದ್ದಾರೆ. ರೂರ್ಕೆಲಾದಿಂದ 25 ಕಿ.ಮೀ. ದೂರದಲ್ಲಿರುವ ಝಾರ್‌ಬಹಲ್‌ ಬಳಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿಗಳು ಪಾದ್ರಿಗಳ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ದಾರೆ ಎಂದು ರೂರ್ಕೆಲಾದ ಉಪವಿಭಾಗೀಯ ಅಧಿಕಾರಿ ನಿರ್ಮಲ್‌ ಚಂದ್ರ ಮಹೋ ಪಾತ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next