Advertisement

ಮಹಿಳಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ: ಗ್ರಾ.ಪಂ. ಸದಸ್ಯನ ವಿರುದ್ಧ ಪ್ರಕರಣ ದಾಖಲು

01:08 AM Dec 29, 2022 | Team Udayavani |

ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ದೇಲಟ್ಟು ಪರಿಸರದಲ್ಲಿ ಅನಧಿಕೃತ ಆವೆ ಮಣ್ಣಿನ ಗಣಿಗಾರಿಕೆಯಿಂದಾಗಿ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ನೀಡಿದ ದೂರಿನಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿ ಸಂಧ್ಯಾ ಕುಮಾರಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಡಿ. 26ರಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಗಣಿಗಾರಿಕಾ ಜಾಗಕ್ಕೆ ಸಂಬಂಧಪಟ್ಟವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೊಡುವಂತೆ ತಿಳಿಸಿದಾಗ ಅಲ್ಲಿದ್ದ ಸ್ಥಳೀಯರು ಬಸೂÅರು ಗ್ರಾಮ ಪಂಚಾಯತ್‌ ಸದಸ್ಯ ಬೇಳೂರು ದಿನಕರ ಶೆಟ್ಟಿ ಅವರಿಗೆ ತಮ್ಮ ಮೊಬೈಲ್‌ನಿಂದ ಕರೆ ಮಾಡಿ ನೀಡಿದ್ದು, ಈ ಸಂದರ್ಭ ಅಧಿಕಾರಿ ಸಂಧ್ಯಾ ಕುಮಾರಿ ಅವರು ನಾನು ಗಣಿ ಇಲಾಖೆಯ ಅಧಿಕಾರಿ, ಇಲ್ಲಿ ಕೊಜೆ ಮಣ್ಣು ತೆಗೆಯುವ ಜಾಗ ನಿಮ್ಮದಾ, ಕೊಜೆ ಮಣ್ಣು ತೆಗೆಯಲಿಕ್ಕೆ ಪರವಾನಿಗೆ ಇದೆಯಾ? ಎಂದು ಕೇಳಿದಾಗ ಅದಕ್ಕೆ ಉತ್ತರವಾಗಿ ಬೇಳೂರು ದಿನಕರ ಶೆಟ್ಟಿ ದರ್ಪದಿಂದ ಮಾತನಾಡಿದ್ದಲ್ಲದೆ ಬೆದರಿಸಿದ್ದು, ಮಹಿಳಾ ಅಧಿಕಾರಿ ಎಂಬುವುದನ್ನು ಕೂಡ ಲೆಕ್ಕಿಸದೆ ಅವಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಅವಮಾನಿಸಿದ್ದರು.

ಸರಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿರುವುದಾಗಿ ಅಧಿಕಾರಿ ಯವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next