Advertisement

ಮರಾಠ ಸಮುದಾಯಕ್ಕೆ OBC ಸೌಲಭ್ಯ ನಿರ್ಧಾರ ಒಪ್ಪಲ್ಲ: ರಾಣೆ

11:20 PM Jan 28, 2024 | Team Udayavani |

ಮುಂಬೈ: ಮರಾಠ ಸಮುದಾಯಕ್ಕೆ ಮೀಸಲು ಸಿಗುವವರೆಗೂ ಒಬಿಸಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಆ ಸಮುದಾಯಕ್ಕೆ ನೀಡುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ತಾವು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದ್ದಾರೆ.

Advertisement

“ಈ ನಿರ್ಧಾರವು ಐತಿಹಾಸಿಕ ಪರಂಪರೆ ಹೊಂದಿರುವ ಮರಾಠ ಸಮುದಾಯದ ದಮನಕ್ಕೆ ಕಾರಣವಾಗಲಿದೆ ಮತ್ತು ಇದರಿಂದ ಇತರೆ ಹಿಂದುಳಿದ ಸಮುದಾಯಗಳ ಮೇಲೆ ಅತಿಕ್ರಮಣವಾಗಲಿದೆ. ಮಹಾರಾಷ್ಟ್ರದಲ್ಲಿ ಅಶಾಂತಿಗೂ ಇದು ಕಾರಣವಾಗಲಿದೆ’ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಕೂಡ ಆಗಿರುವ ರಾಣೆ ಟ್ವೀಟ್‌(ಎಕ್ಸ್‌) ಮಾಡಿದ್ದಾರೆ. ಶನಿವಾರವಷ್ಟೇ ಮಹಾರಾಷ್ಟ್ರ ಸರ್ಕಾರವು ಮರಾಠ ಸಮುದಾಯದ ಬೇಡಿಕೆಗಳಿಗೆ ಒಪ್ಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next