Advertisement

GST ವ್ಯಾಪ್ತಿಗೆ ಅಡಿಕೆ, ಹೆಸರು, ಸಿಮೆಂಟ್‌? -1,300 ಕೋಟಿ ರೂ. ಜಿಎಸ್‌ಟಿ ದಂಡ ವಸೂಲಿ

10:26 PM Jul 14, 2023 | Team Udayavani |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಅಡಿಕೆ, ಹೆಸರು, ಸಿಮೆಂಟ್‌, ಕ್ರಷರ್‌, ತ್ಯಾಜ್ಯ (ಸಾðéಪ್‌) ಇತ್ಯಾದಿಗಳನ್ನು ತರುವ ಬಗ್ಗೆ ಸಲಹೆಗಳು ಬಂದಿದ್ದು, ಜಿಎಸ್‌ಟಿ ಮಂಡಳಿಯ ಗಮನಕ್ಕೆ ತರುವ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

Advertisement

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆಯ ಮೇಲೆ ನಡೆದ ಚರ್ಚೆಗಳಿಗೆ ಉತ್ತರಿಸಿದ ಸಚಿವರು, ನಾವಿಂದು ಬಜೆಟ್‌ ಗಾತ್ರ ಹೆಚ್ಚಿಸಿದ್ದೇವೆ ಎಂದರೆ ಅದಕ್ಕೆ ಜಿಎಸ್‌ಟಿ ಕೊಡುಗೆ ಅಪಾರವಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ನರಸಿಂಹ ರಾವ್‌, ಮನಮೋಹನ್‌ಸಿಂಗ್‌, ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಬೇಕು. ಆರಂಭದಲ್ಲಿ ತಟಸ್ಥರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಜಿಎಸ್‌ಟಿಯನ್ನು ಒಪ್ಪಿಕೊಂಡು, ಅನೇಕ ಅಗತ್ಯ ಬದಲಾವಣೆಗಳನ್ನು ತಂದಿದ್ದಾರೆ ಎಂದು ಶ್ಲಾಸಿದರು.

2022-23ರಲ್ಲಿ 11,733 ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ, 1,320 ಕೋಟಿ ರೂ. ತೆರಿಗೆ ಹಾಗೂ ದಂಡ ವಸೂಲಿ ಮಾಡಲಾಗಿದೆ. ಖೊಟ್ಟಿ ಬಿಲ್‌ಗ‌ಳಿಗೆ ಸಂಬಂಧಿಸಿ 1,600 ಪ್ರಕರಣಗಳನ್ನು ಪತ್ತೆ ಹಚ್ಚಿ 90 ಕೋಟಿ ರೂ. ಮೌಲ್ಯದ ತೆರಿಗೆ ಸಾಲ ಸಹಾಯಧನ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ತಡೆ ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಇ-ಕಾಮರ್ಸ್‌ ವ್ಯವಹಾರ ನಡೆಸುವವರ ತಪಾಸಣೆಯನ್ನು ಹೆಚ್ಚು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತೆರಿಗೆ ವಂಚಕರೇ ಹೊಣೆ
ಹಲವು ವ್ಯಾಪಾರ ಮತ್ತು ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಅಡಿಕೆ, ಹೆಸರು, ಸಿಮೆಂಟ್‌, ಕ್ರಷರ್‌, ತ್ಯಾಜ್ಯ ವಸ್ತು (ಸಾðéಪ್‌)ಗಳನ್ನು ಜಿಎಸ್‌ಟಿ ಅಧೀನದಲ್ಲಿ ತರಬೇಕೆಂಬ ಸಲಹೆಗಳನ್ನು ಕೊಟ್ಟಿದ್ದೀರಿ. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಗಂಭೀರವಾಗಿ ಚರ್ಚಿಸಿ, ಜಿಎಸ್‌ಟಿ ಮಂಡಳಿ ಸಭೆ ಮುಂದೆ ಮಂಡಿಸುತ್ತೇವೆ. ಇಷ್ಟೇ ಅಲ್ಲದೆ ತೆರಿಗೆ ವಂಚನೆ ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸುವ ಹೊಣೆಯನ್ನು ಅಧಿಕಾರಿಗಳಿಗೇ ಕೊಡಲಾಗಿದೆ. ಇದಕ್ಕೆ ಕಾಯ್ದೆಯಲ್ಲಿ ತಿದ್ದುಪಡಿ ತಂದು ಆರೋಪ ಸುಳ್ಳೆಂದು ಸಾಬೀತು ಮಾಡುವ ಹೊಣೆಯನ್ನು ಆರೋಪಿಯೇ ಹೊರಬೇಕೆಂದೂ ಶಿಫಾರಸು ಮಾಡುತ್ತೇವೆ ಎಂದರು.

ಸಾಕಷ್ಟು ಚರ್ಚೆಗಳ ಅನಂತರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ-2023ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

Advertisement

ನೋಂದಣಿ ಕಡ್ಡಾಯ ಮಾಡಿ: ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಕೀರ್ಣವಾಗಿದ್ದ ತೆರಿಗೆ ಪದ್ಧತಿಯನ್ನು ಸರಳಗೊಳಿಸುವತ್ತ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದೀರಿ. ಇಷ್ಟು ದಿನ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲದ ವಸ್ತುಗಳನ್ನು ಮಾರುತ್ತಿದ್ದವರು ಜಿಎಸ್‌ಟಿ ಅಧೀನದ ಪದಾರ್ಥಗಳನ್ನು ಮಾರಾಟ ಮಾಡಿದರೆ ಸರಕಾರಕ್ಕೆ ನಷ್ಟವಾಗಲಿದೆ.

ಹೀಗಾಗಿ ಎಲ್ಲರಿಗೂ ಜಿಎಸ್‌ಟಿ ನೋಂದಣಿ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು. 3 ವರ್ಷಗಳ ವಹಿವಾಟಿನ ಮಾಹಿತಿ ನೀಡಿ ತೆರಿಗೆ ಸಾಲ ಸಹಾಯಧನ (ಐಟಿಸಿ) ಪಡೆಯಲು ಅವಕಾಶ ಮಾಡಿಕೊಡುತ್ತಿದ್ದೀರಿ. ಆದರೆ 3 ವರ್ಷದ ವಹಿವಾಟು ದಾಖಲೆಗಳನ್ನು ಕಾಪಿಡುವುದು, ಪರಿಷ್ಕರಿಸದೆ ಇರುವುದು ಕಷ್ಟ. ಈ ಅವಧಿ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಒಂದು ಕಂಪೆನಿ ಆರಂಭಿಸಿ ಐಟಿಸಿ ಪಡೆದವನು 3 ವರ್ಷಗಳಲ್ಲಿ ಅದನ್ನು ಮುಚ್ಚಿ ಇನ್ನೊಂದು ಕಂಪೆನಿ ಆರಂಭಿಸಿದರೆ ಅದಕ್ಕೂ ಐಟಿಸಿ ಕೊಡಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ನಷ್ಟವಾಗಲಿದೆ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next