Advertisement

3,000 ಕೋಟಿ ಪರಿಹಾರ ಮಾನನಷ್ಟ ಮೊಕದ್ದಮೆ: ರತನ್‌ ಟಾಟಾ ನಿರಾಳ

09:58 AM Jan 14, 2020 | Hari Prasad |

ಹೊಸದಿಲ್ಲಿ: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್‌ ಟಾಟಾ ವಿರುದ್ಧ 3,000 ಕೋಟಿ ಪರಿಹಾರ ಕೋರಿ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಬಾಂಬೆ ಡೈಯಿಂಗ್‌ ಕಂಪೆನಿಯ ಮುಖ್ಯಸ್ಥ ನುಸ್ಲಿ ವಾಡಿಯಾ ಹಿಂಪಡೆದಿದ್ದಾರೆ.

Advertisement

ವಾಡಿಯಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಸಿಜೆಐ ಎಸ್‌.ಎ. ಬೋಬ್ಡೆ ನೇತೃತ್ವದ ಪೀಠ, ರತನ್‌ ಟಾಟಾ ಹಾಗೂ ಟಾಟಾ ಸಮೂಹ ಸಂಸ್ಥೆಗಳ ಇನ್ನಿತರ ಅಧಿಕಾರಿಗಳು ವಾಡಿಯಾ ವಿರುದ್ಧ ಈ ಹಿಂದೆ ನೀಡಿದ್ದ ಹೇಳಿಕೆಗಳು ಮಾನನಷ್ಟ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ವಾಡಿಯಾ ಕೇಸು ಹಿಂಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next