Advertisement

Kasaragod ಮಾತೃತ್ವ ಮೆರೆದ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌

12:14 AM Jun 16, 2024 | Team Udayavani |

ಕಾಸರಗೋಡು: ಅಸೌಖ್ಯದಿಂದ ಸಾವಿಗೀಡಾದ ಮಹಿಳೆಯ 37 ದಿನದ ಹಸುಗೂಸಿಗೆ ಎದೆಹಾಲುಣಿಸಿ ಕಾಸರಗೋಡು ಜನರಲ್‌ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌ ಮೆರಿನ್‌ ಮಾತೃತ್ವ ಮೆರೆದಿದ್ದಾರೆ. ಮೂಲತಃ ಅಸ್ಸಾಂ ನಿವಾಸಿ ಹಾಗೂ ಕುಣಿಯದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ರಾಜೇಶ್‌ ಬರ್ಮನ್‌ ಅವರ ಪತ್ನಿ ಏಕಾದಶಿ ಮಾಲಿ ಮೇ 5 ರಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

Advertisement

ವಾಂತಿಬೇಧಿಯಿಂದ ಬಳಲುತ್ತಿದ್ದ ಆಕೆಯನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂ.13ರಂದು ಸಾವಿಗೀಡಾದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಆಹಾರವಿಲ್ಲದೆ ಹಸಿವು ತಾಳಲಾರದೆ ಮಗು ರಿಯಾ ಬರ್ಮನ್‌ ಅಳತೊಡಗಿದಾಗ ಈ ದಾದಿ ಹಸುಗೂಸನ್ನು ಕೈಗೆತ್ತಿಕೊಂಡು ಎದೆ ಹಾಲು ಉಣಿಸಿ ಮಾತೃತ್ವವನ್ನು ಮೆರೆದರು.

ಮಾನವೀಯತೆಯನ್ನು ತೋರಿದ ಮೆರಿನ್‌ ಅವರಿಗೆ ಪ್ರಶಂಸೆ ವ್ಯಕ್ತವಾಯಿತು. ಆಸ್ಪತ್ರೆಯ ಡೆಪ್ಯೂಟಿ ಸುಪರಿಂಟೆಂಡೆಂಟ್‌ ಡಾ|ಜಮಾಲ್‌ ಅಹಮ್ಮದ್‌ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next