Advertisement

ಕುತ್ಯಾರು ಆನೆಗುಂದಿ ಸಂಸ್ಥಾನಕ್ಕೆ ನರ್ಮ್ ಬಸ್‌: ಶಾಸಕ ಸೊರಕೆ

02:40 AM Jul 14, 2017 | Team Udayavani |

ಪಡುಬಿದ್ರಿ: ಕುತ್ಯಾರು ವಿಶ್ವಬ್ರಾಹ್ಮಣ ಶ್ರೀ ಜಗದ್ಗುರು ಶ್ರೀ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀ ಕಾಳಹಸ್ತೆಂದ್ರ ಸರಸ್ವತೀ ಶ್ರೀಗಳವರ ಚಾತುರ್ಮಾಸ್ಯ ಕಾರ್ಯಕ್ರಮವು ನಡೆಯುತ್ತಿದ್ದು ಶ್ರೀ ಕ್ಷೇತ್ರಕ್ಕಾಗಮಿಸುವ ಹೊರಗಿನ ಭಕ್ತರಿಗೆ ಅನುಕೂಲವಾಗುವಂತೆ ಈಗಾಗಲೇ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳ ವಿಶೇಷ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ತಿಳಿಸಿದ್ದಾರೆ. 

Advertisement

ಗ್ರಾಮೀಣ ಪ್ರದೇಶದ ಜನತೆಯ ಬೇಡಿಕೆಗೆ ಪೂರಕವಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯರಿಗೆ, ಅಂಗವಿಕಲರಿಗೆ, ವಿದ್ಯಾರ್ಥಿಗಳಿಗೆ, ಬಿಪಿಎಲ್‌ ಕಾರ್ಡ್‌ದಾರರಿಗೆ, ಸರಕಾರಿ ನೌಕರರಿಗೆ, ಮಹಿಳೆಯರಿಗೆ ರಿಯಾಯತಿ ದರದಲ್ಲಿ ನರ್ಮ್ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗುವುದೆಂದು ಶಾಸಕರು ತಿಳಿಸಿರುವರು.  ಜನರ ಅಪೇಕ್ಷೆಯಂತೆ ನರ್ಮ್ ಬಸ್‌ಗಳ ಸಂಚಾರಿ ವ್ಯವಸ್ಥೆಗೆ ಸಾರಿಗೆ ಅಧಿಕಾರಿಗಳು ಈಗಾಗಲೇ ಸರ್ವೆ ನಡೆಸಿದ್ದು ಬಸ್ಸುಗಳ ಮಂಜೂರಾತಿಗಾಗಿ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದೂ ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next