Advertisement
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಕೃಷಿ ಪ್ರತಿಷ್ಠಾನ ಸ್ವರ್ಣವಲ್ಲೀ ಆಯೋಜನೆಯಲ್ಲಿ ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಾಲೂಕಿನ ಭೌಗೋಳಿಕ ಪರಿಚಯದೊಂದಿಗೆ ಹಸಿರು ಕ್ರಾಂತಿ ಬೆಳವಣಿಗೆ ಹಾಗೂ ಬಂಜರು ಭೂಮಿಯನ್ನು ಫಲವಂತಿಕೆ ಮಾಡುವ ಪರಿ ವಿವರಿಸಿದರು.
ಇದೇ ವೇಳೆ ಯುವ ರೈತ ಉಮೇಶ ಗೌಡ ಹೊಸಕೊಪ್ಪ ಹಾಗೂ ಶೈಲಜಾ ನಿಂಗಳಕಿ ಇವರನ್ನು ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಯುವ ರೈತರು ಸಭೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಸಭಾಧ್ಯಕ್ಷ ಸ್ಥಾನದಿಂದ ಎಂ.ಕೆ. ಹೆಗಡೆ ಚಿಪಗೇರಿಯವರು ಇಂದಿನ ದಿನದಲ್ಲಿ ಕೃಷಿಯ ಅಗತ್ಯತೆ ಬಗ್ಗೆ ವಿವರಿಸಿದರು.
ಸಂಪನ್ಮೂಲ ಕೇಂದ್ರದ ಗಣಪತಿ, ಶ್ರೀಧರ ಹೆಗಡೆ ಗುಡ್ಡೇಮನೆ, ಸಿ.ಆರ್.ಪಿಗಳಾದ ಮಾನಸಿಂಗ್ ರಾಥೋಡ ಇದ್ದರು. ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಟಿ. ಹೆಗಡೆ ವಂದಿಸಿದರು. ಅನುಷಾ ಹೆಗಡೆ ಸೋಂದಾ ನಿರ್ವಹಿಸಿದರು.
ಕೃಷಿ ರಸಪ್ರಶ್ನೆ ವಿಜೇತರುಕಾತೂರಿನ ಸರ್ಕಾರಿ ಪ್ರೌಢಶಾಲೆಯ ಧನ್ಯಾ ಭಟ್ಟ ಹಾಗೂ ರಕ್ಷಿತಾ ಗಲಗಿನಕಟ್ಟಾ ಪ್ರಥಮ, ಮಳಗಿ ಸರ್ಕಾರಿ ಪ್ರೌಢಶಾಲೆಯ ಆಶಾ ಭೋವಿ ಹಾಗೂ ಪ್ರಭಾವತಿ ನಾಯ್ಕ ದ್ವಿತೀಯ, ಅಂದಲಗಿ ಪ್ರೌಢಶಾಲೆಯ ಯಾಸಿನ್ ಮಮ್ದೂನವರ ಮತ್ತು ಮಂಜುನಾಥ ಕುಂದಗೋಳ ಕೃಷಿ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದರು.