Advertisement

ನೂಜಿಬಾಳ್ತಿಲ: ಕಾಡಾನೆ ದಾಳಿ, ಕೃಷಿ ನಾಶ

12:32 PM Aug 04, 2018 | Team Udayavani |

ಕಡಬ: ನೂಜಿಬಾಳ್ತಿಲ ಗ್ರಾಮದ ಅಡೆಂಜ ಅಂಗನವಾಡಿ ಕೇಂದ್ರದ ವಠಾರಕ್ಕೆ ಗುರುವಾರ ತಡರಾತ್ರಿ ಲಗ್ಗೆಯಿಟ್ಟ ಕಾಡಾನೆ ಬಾಳೆ ಹಾಗೂ ತೆಂಗಿನ ಗಿಡಗಳಿಗೆ ಹಾನಿ ಎಸಗಿದೆ.

Advertisement

ಅಡೆಂಜ ಆಸುಪಾಸು ಓಡಾಡಿದ ಅನೆ ದಾರಿಯುದ್ದಕ್ಕೂ ಮರ ಗಿಡಗಳಿಗೆ ಹಾನಿ ಮಾಡಿದೆ. ಅಂಗನವಾಡಿ ವಠಾರಕ್ಕೆ ನುಗ್ಗಿ ಬೆಳೆಹಾನಿ ಮಾಡಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಸಾರಮ್ಮ  ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. 

ಒಂದು ವಾರದಿಂದ ಆನೆಗಳು ಓಡಾಡುತ್ತಿದ್ದು , ಹಲವರ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿವೆ ಎಂದು ರೈತರು  ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next