Advertisement

ದಿನಕರನ್‌ ಬಣದ ಶಾಸಕರಿಗೆ ಈಗ ಅನರ್ಹತೆಯ ಗುಮ್ಮ

08:50 AM Aug 25, 2017 | Team Udayavani |

ಚೆನ್ನೈ: ಎಐಎಎಡಿಎಂಕೆ ಪಕ್ಷದಲ್ಲಿ, ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ ಬೆಂಬಲಿತ ಶಾಸಕರ ಬಂಡಾಯ ಇದೀಗ ಅವರನ್ನು ಅನರ್ಹತೆಯ ಭೀತಿಯತ್ತ ದೂಡಿದೆ. 

Advertisement

ಸದ್ಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಬಂಡಾಯ 19 ಶಾಸಕರನ್ನು ಅನರ್ಹಗೊಳಿ ಸುವಂತೆ, ಮುಖ್ಯ ಸಚೇತಕ ಎಸ್‌.ರಾಜೇಂದ್ರನ್‌ ಅವರು ಸ್ಪೀಕರ್‌ ಅವರನ್ನು ಕೋರಿದ್ದಾರೆ. ಫೆ.14ರಂದು ಎಐಎಡಿಎಂಕೆ ಶಾಸಕಾರು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಬಳಿಕ ಈಗಿನ 19 ಬಂಡಾಯ ಶಾಸಕರು, ಮಾಧ್ಯಮದ ಮುಂದೆ ಮಾತನಾಡಿದ್ದೂ ಅಲ್ಲದೇ ಅವರಿಗೆ ತಮ್ಮ ಬೆಂಬಲ ಇಲ್ಲ ಎಂದು ರಾಜ್ಯಪಾಲರನ್ನು ಭೇಟಿ ಮಾಡಿ ಹೇಳಿದ್ದಾರೆ. 

ಇದು ಸಂಪೂರ್ಣ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಅವರನ್ನು ಅನರ್ಹ ಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾಗಿ ಸಚೇತಕರು ಹೇಳಿದ್ದಾರೆ.

ದಿನಕರನ್‌ಗೆ ಸಿಎಂ ಆಗುವ ಇಚ್ಛೆ ಇಲ್ಲ: ಏತನ್ಮಧ್ಯೆ ದಿನಕರನ್‌ ಅವರಿಗೆ ಸಿಎಂ ಆಗುವ ಇಚ್ಛೆ ಇಲ್ಲ. ಸಿಎಂ ಆಗಿರುವ ಪಳನಿಸ್ವಾಮಿ ಮತ್ತು ಡಿಸಿಎಂ ಆಗಿರುವ ಒ. ಪನ್ನೀರ್‌ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಬಂಡಾಯ ಶಾಸಕರು ಹೇಳಿದ್ದಾರೆ. ಈಗ ಸ್ಪೀಕರ್‌ ಆಗಿರುವ ಪಿ. ಧನಪಾಲ್‌ ಸಹಿತ ಬೇರೆ ಯಾರನ್ನೇ ಸಿಎಂ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next