Advertisement

ಪುದುಚೆರಿಯಲ್ಲಿ ಈಗ ಹೊಸ ಜಗಳ

01:33 AM Jul 23, 2019 | Team Udayavani |

ಪುದುಚೆರಿ: ಚುನಾವಣಾ ಆಯುಕ್ತರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೆರಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್‌ ಕಿರಣ್‌ ಬೇಡಿ ನಡುವೆ ಹೊಸ ವಿವಾದ ಶುರುವಾಗಿದೆ. ರಾಜ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪತ್ರಿಕೆಗಳಲ್ಲಿ ಲೆಫ್ಟಿನೆಂಟ್ ಗವರ್ನರ್‌ ಹೆಸರಲ್ಲಿ ಜಾಹೀರಾತು ಪ್ರಕಟವಾಗಿದೆ. ಈ ವಿಚಾರ ಪುದುಶ್ಶಿರಿ ಸರ್ಕಾರದ ಸ್ಥಳೀಯಾಡಳಿತ ಇಲಾಖೆ ಗಮನಕ್ಕೆ ಬಂದಿಲ್ಲ ಎನ್ನುವುದೇ ಹೊಸ ಗಲಾಟೆಗೆ ಕಾರಣ. ಸದ್ಯ ನಡೆಯುತ್ತಿರುವ ಈ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪಕ್ಷಬೇಧ ಮರೆತು ಚರ್ಚೆ ಮಾಡಿದ್ದಾರೆ. ಜಾಹೀರಾತು ನೀಡಿದ್ದು ಚುನಾಯಿತ ಸರ್ಕಾರದ ಹಕ್ಕುಗಳ ಉಲ್ಲಂಘನೆ ಎಂದು ಸರ್ವಾನುಮತದಿಂದ ಅಂಗೀಕರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next