Advertisement

Kasaragod ಜೈಲಿನಿಂದ ಹೊರ ಬಂದ ಕುಖ್ಯಾತ ಕಳ್ಳರು; ಪೊಲೀಸರಿಂದ ಎರಡು ತಂಡ ರಚನೆ

11:36 PM Aug 06, 2024 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಕಡೆಗಳಲ್ಲಿ ವ್ಯಾಪಕ ಕಳವು ಕೃತ್ಯ ನಡೆದಿದ್ದು, ಇದರಿಂದ ಜನತೆ ಆತಂಕಿತರಾಗಿದ್ದಾರೆ.

Advertisement

ಕುಖ್ಯಾತ ಕಳ್ಳರು ಜೈಲಿನ ಶಿಕ್ಷೆ ಕಳೆದು ಹೊರಗೆ ಬಂದಿದ್ದು, ವ್ಯಾಪಕ ಕಳವಿನ ಹಿಂದೆ ಇವರಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವ್ಯಾಪಕ ಕಳವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರ ಎರಡು ಸ್ಕಾಡ್‌ಗಳನ್ನು ರಚಿಸಲಾಗಿದ್ದು, ತನಿಖೆ ನಡೆಸುತ್ತಿದೆ.

ಕಾಸರಗೋಡು ಹಾಗು ಕಾಂಞಂಗಾಡ್‌ ಡಿವೈಎಸ್‌ಪಿಗಳ ನೇತೃತ್ವದಲ್ಲಿ ಈ ಸ್ಕಾಡ್‌ಗಳು ಕಾರ್ಯಾಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next