Advertisement
ಸರಕಾರದ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದ ಪ್ರಯೋಜನವನ್ನು ಸಮಾಜದ ತಳಮಟ್ಟದಲ್ಲಿರುವ ಜನಸಾಮಾನ್ಯರಿಗೂ ಮುಟ್ಟಿಸುವ ಪ್ರಯತ್ನವಾಗಿ, ಆ ಕಾರ್ಯಕ್ರಮವನ್ನು ಪುನಃ ಆಯೋಜಿಸಬೇಕೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ಮೇರೆಗೆ ಸಚಿವಾಲಯ ಈ ನಿರ್ದೇಶನ ನೀಡಿದೆ.
Related Articles
Advertisement
ಇದರಿಂದ, ಎಂಎಸ್ಎಂಇ ವಲಯಕ್ಕೆ ಸುಲಭ ಸಾಲ ಸೌಲಭ್ಯ, ಉತ್ಪನ್ನಗಳ ಸರಳ ಮಾರಾಟ, ತಂತ್ರಜ್ಞಾನ ಅಳವಡಿಕೆ, ಸ್ನೇಹಮಯ ವ್ಯಾಪಾರ ವ್ಯವಸ್ಥೆ, ಈ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮುಂತಾದ ಅನುಕೂಲಗಳನ್ನು ಕಲ್ಪಿಸಲು ಈ ಸಭೆ ನೆರವಾಗಲಿದೆ.
ಇದರ ಜತೆಗೆ, ಎಂಎಸ್ಎಂಇ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶವೂ ಇದರ ಹಿಂದಿದೆ. ಇಂಥ ಸಭೆಗಳಲ್ಲಿ ಮಂಡನೆಯಾಗುವ ಸಮಸ್ಯೆ, ವಿಚಾರಗಳು ಸರಕಾರದ ಗಮನಕ್ಕೆ ಬೇಗನೇ ಬರುವುದರಿಂದ ಸಮಸ್ಯೆಗಳನ್ನು ತ್ವರಿತ ಪರಿಹಾರ ಕ್ಕೆ ಅನುಕೂಲವಾಗುತ್ತದೆ. ಹಾಗಾಗಿ, ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕೇಂದ್ರ ಸರಕಾರ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.
ದೇಶದ ರಾಷ್ಟ್ರೀಯ ಉತ್ಪನ್ನ, ರಫ್ತು, ಕೈಗಾರಿಕಾ ಉತ್ಪಾದನೆ, ಉದ್ಯೋಗಾವಕಾಶ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಎಂಎಸ್ಎಂಇ ವಲಯ ಕೈ ಜೋಡಿಸಿದೆ. ಆದರೆ, ಈ ವಲಯವು ಇತ್ತೀಚಿನ ಕೆಲವು ವರ್ಷಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು, ಹಿನ್ನಡೆಗಳನ್ನು ಗಂಭೀರವಾಗಿ ಮನಗಂಡಿರುವ ಸರಕಾರ ಅವುಗಳ ನಿವಾರಣೆಗೆ ಕಟಿಬದ್ಧವಾಗಿದೆ. ಅವುಗಳ ನಿವಾರಣೆಗಾಗಿಯೇ “ಔಟ್ ರೀಚ್’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.