Advertisement

ಪ್ರಾಥಮಿಕ ಶಿಕ್ಷಣ ಮುಗಿಯುವರೆಗೂ ಮುಂದುವರಿಸಲು ಸೂಚನೆ

09:37 AM Apr 24, 2019 | Team Udayavani |

ಬೆಂಗಳೂರು: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿಯಲ್ಲಿ ಪ್ರವೇಶ ಪಡೆದಿರುವ ಮಕ್ಕಳನ್ನು ಎಲಿಮೆಂಟರಿ ಶಿಕ್ಷಣ ಮುಗಿಸುವವರೆಗೂ ಅದೇ ಶಾಲೆಯಲ್ಲಿ ಮುಂದುವರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಸಿಬಿಎಸಿ ಹಾಗೂ ಐಸಿಎಸಿ ಪಠ್ಯ ಕ್ರಮ ಬೋಧಿಸುತ್ತಿರುವ ಕೆಲವು ಖಾಸಗಿ ಅನುದಾನ ರಹಿತ ಶಾಲೆಗಳು ವಿವಿಧ ಕಾರಣ ನೀಡಿ, ಉಚಿತ ಶಿಕ್ಷಣ ಕಾಯಿದೆ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಎಲಿಮೆಂಟರಿ (ಪ್ರಾಥಮಿಕ) ಶಿಕ್ಷಣ ಪೂರೈಸುವ ಮುನ್ನವೇ ವರ್ಗಾವಣೆ ಪ್ರಮಾಣ ಪತ್ರ ನೀಡಿ ಹೊರ ಹಾಕುತ್ತಿರುವ ಬಗ್ಗೆ ಪೊಷಕರು ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ 2009ರ ಕಡ್ಡಾಯ ಹಾಗೂ ಉಚಿತ ಕಾಯ್ದೆಗೆ 2019ರ ಜನವರಿಯಲ್ಲಿ ತಿದ್ದುಪಡಿ ಮಾಡಿದ್ದು, ಸೆಕ್ಷನ್‌ 16(4) ತಿದ್ದುಪಡಿ ಅನ್ವಯ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯನ್ವಯ ದಾಖಲಾದ ಮಕ್ಕಳನ್ನು ಪ್ರಾಥಮಿಕ ಶಿಕ್ಷಣ ಪೂರೈಸುವವರೆಗೂ ಹೊರ ಹಾಕಲು ಅವಕಾಶ ಇರುವುದಿಲ್ಲ ಎಂದು ಸರ್ಕಾರದ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next