Advertisement

ರಾಜು ಕಾಗೆ ಬಂಡಾಯದ ಸೂಚನೆ

01:42 AM Oct 11, 2019 | Team Udayavani |

ಕಾಗವಾಡ: ಬಿಜೆಪಿ ನನಗೆ ಕಾಗವಾಡದಿಂದ ಟಿಕೆಟ್‌ ನೀಡದೆ ಹೋದರೆ ಕಾಂಗ್ರೆಸ್‌ ಅಥವಾ ಪಕ್ಷೇತರನಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಭರಮಗೌಡ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರು ಬಂಡಾಯದ ಸುಳಿವು ನೀಡಿದ್ದಾರೆ. ಗುರುವಾರ ಪತ್ರಕರ್ತರ ಜತೆ ಮಾತನಾಡಿ, ಬಿಜೆಪಿ ಸರಕಾರ ನನಗೆ ನೀಡಿರುವ ನಿಗಮ ಸ್ಥಾನ ಅಳುವ ಮಕ್ಕಳಿಗೆ ಚಾಕೊಲೆಟ್‌ ಕೊಟ್ಟಂತಿದೆ. ಇದನ್ನು ಸ್ವೀಕರಿಸುವುದಿಲ್ಲ. ಪಕ್ಷಕ್ಕೆ ಹೊರಗಿನಿಂದ ಕರೆ ತಂದವರ ಪ್ರಚಾರಕ್ಕೆ ನಾನು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next