Advertisement

ಪರ ಪ್ರಾಂತ್ಯದ ಲಾರಿ ನಿರ್ಬಂಧಕ್ಕೆ ಸೂಚನೆ

05:12 PM Apr 21, 2020 | Suhan S |

ಬ್ಯಾಡಗಿ: ಕೋವಿಡ್ 19 ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಅಂತಾರಾಜ್ಯ ಓಡಾಡಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಹೀಗಾಗಿ ಪರಪ್ರಾಂತದ ಲಾರಿಗಳ ಆಗಮನ ಹಾಗೂ ನಿರ್ಗಮನ ಕೂಡಲೇ ಸ್ಥಗಿತಗೊಳಿಸುವಂತೆ ತಹಶೀಲ್ದಾರ್‌ ಶರಣಮ್ಮ ಕಾರಿ ಅವರು ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅದೃಷ್ಟವಶಾತ್‌ ತಾಲೂಕಿನಲ್ಲಿ ಯಾವುದೇ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ರೆಡ್‌ಜೋನ್‌, ಹಾಟ್‌ ಸ್ಪಾಟ್‌ ಇನ್ನಿತರ ಹೈಅಲರ್ಟ್‌ ಏರಿಯಾಗಳಿಂದ ಚಾಲಕರು ಬರುತ್ತಿದ್ದಾರೆ. ಅವರಲ್ಲಿ ಯಾರಾದರೂ ಸೋಂಕಿತರಿದ್ದರೆ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಹೀಗಾಗಿ ಪರಪ್ರಾಂತದ ವಾಹನಗಳನ್ನು ಬ್ಯಾಡಗಿ ಪಟ್ಟಣದೊಳಗೆ ಬಿಡಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಚಾಲಕರ ಗಾಡಿಗಳು ಸಹ ಬೇರೆ ರಾಜ್ಯಗಳಿಗೆ ಹೋಗಿಬಂದಲ್ಲಿ ಚಾಲಕರಿಗೆ ಕ್ವಾರಂಟೈನ್‌ ಕಡ್ಡಾಯವಾಗಲಿದ್ದು, ಸರಕು ಸಾಗಾಟ ನಿಲ್ಲಿಸುವಂತೆ ಸಭೆಯಲ್ಲಿ ಆದೇಶಿಸಿದರು.

ಲಾಕ್‌ಡೌನ್‌ ಬಿಗಿಗೊಳಿಸಿ: ಪಟ್ಟಣದಲ್ಲಿ ಸಾಮಾಜಿಕ ಅಂತರದೊಂದಿಗೆ ದಿನಸಿ ಅಂಗಡಿಗಳಷ್ಟೇ ತೆರೆಯಬೇಕು. ಆದರೆ, ಬೆಳಗ್ಗೆ ಸಮಯದಲ್ಲಿ ಸ್ಟೇಷನರಿ, ಹಾರ್ಡ್‌ವೇರ್‌ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅವರಿಗೆ ತಹಶೀಲ್ದಾರ್‌ ಸೂಚನೆ ನೀಡಿದರು.

ಸಿಪಿಐ ಭಾಗ್ಯವತಿ ಮಾತನಾಡಿ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದೆ. ನಾಳೆಯಿಂದಲೇ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಪೊಲೀಸ್‌ ಇಲಾಖೆ ವಶಕ್ಕೆ ಪಡೆದುಕೊಳ್ಳಲಿದೆ ಎಂದರು. ಅಲ್ಲದೇ ಪರಪ್ರಾಂತಗಳಿಂದ ಬರುವಂತಹ ವಾಹನಗಳ ಓಡಾಟವನ್ನು ನಿಲ್ಲಿಸುವಂತೆ ಲಾರಿಗಳ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಲಾರಿ ಏಜೆಂಟರ ಸಂಘಗಳಿಗೆ ನಿರ್ದೇಶನ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ವೈದ್ಯಾಧಿಕಾರಿ ಡಾ| ಪುಟ್ಟರಾಜು, ತಾಲೂಕಾ ಆರೋಗ್ಯಾ ಧಿಕಾರಿ ಡಾ| ಬಿ.ಆರ್‌. ಲಮಾಣಿ, ವಿಜಯ ಪತ್ತಾರ, ಗುಂಡಪ್ಪ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next