Advertisement

ಮೋಹನ್ ದಾಸ್ ಪೈ ಅವರು ಆತಂಕ ಪಡುವಂತದ್ದು ಏನೂ ಆಗಿಲ್ಲ: ಸಿಎಂ

04:44 PM Apr 08, 2022 | Team Udayavani |

ಬೆಂಗಳೂರು : ಉದ್ಯಮಿ ಮೋಹನ್ ದಾಸ್ ಪೈ ಅವರು ಆತಂಕ ಪಡುವಂತದ್ದು ಬೆಂಗಳೂರಿನಲ್ಲಿ ಏನೂ ಆಗಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Advertisement

‘ಬೆಂಗಳೂರು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ’ ಎಂದು ಮೋಹನ್ ದಾಸ್ ಪೈ‌ ಅವರು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, ”ಬೆಂಗಳೂರಿನ ರಸ್ತೆಗಳು ಎಲ್ಲವೂ ಅಭಿವೃದ್ಧಿಯಾಗುತ್ತಿವೆ. ಮಳೆಗಾಲದಿಂದ ಸ್ವಲ್ಪ ತೊಂದರೆ ಆಗಿತ್ತು. ಬರುವಂತ ದಿನಗಳಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿ ಹೊಂದಲಿವೆ” ಎಂದು‌ ಹೇಳಿದರು.

”ಮೋಹನ್ ದಾಸ್ ಪೈ ಆತಂಕ ಪಡುವಂತದ್ದು ಇಲ್ಲಿ ಏನು ಆಗಿಲ್ಲ ಅವರ ಜೊತೆಗೆ ನಾನು ವೈಯಕ್ತಿಕವಾಗಿ ಮಾತನಾಡುತ್ತೇನೆ. ನಗರೋತ್ಥಾನ, ಬಿಬಿಎಂಪಿಗೆ ಹಣ ಬಿಡುಗಡೆ ಮಾಡಿದ್ದೇನೆ.‌ಮುಂದಿನ ದಿನಗಳಲ್ಲಿ ರಸ್ತೆಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿವೆ” ಎಂದು ಹೇಳಿದರು.

”69 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ” ಎಂದು ಹೇಳಿಕೆ ನೀಡಿದ್ದ ಮಾಧ್ಯಮ ಸಂದರ್ಶನದ ವಿಡಿಯೋವನ್ನು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next