Advertisement

ಟಿಕೆಟ್‌ ನೀಡದಿದ್ದಕ್ಕೆ ಬೇಸರವೇನಿಲ್ಲ: ತೇಜಸ್ವಿ

02:27 AM Apr 04, 2019 | Team Udayavani |

ದಾವಣಗೆರೆ: “ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ನನಗೆ ಟಿಕೆಟ್‌ ನೀಡದಿದ್ದಕ್ಕೆ ಬೇಸರವಿಲ್ಲ. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್‌ ನನ್ನನ್ನು ಗುರುತಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ರೈತ ಹೋರಾಟಗಾರ, ದಾವಣಗೆರೆ ಜಿ.ಪಂ. ಸದಸ್ಯ ತೇಜಸ್ವಿ ವಿ. ಪಟೇಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಯಾವ ಪಕ್ಷದ ಅಭ್ಯರ್ಥಿಗ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ, ಜೆಡಿಯು ಎನ್‌ಡಿಎ ಭಾಗವಾಗಿರುವುದರಿಂದ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ ಬೆಂಗಳೂರಲ್ಲಿ ನಮ್ಮ
ಸಹೋದರ ಮಹಿಮಾ ಪಟೇಲರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಈ ಹಿಂದೆ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಜೆ.ಎಚ್‌.ಪಟೇಲರ ಆತ್ಮೀಯರಾಗಿದ್ದರು. ಮೇಲಾಗಿ
ನಾನು ಕೃಷಿ ಮೂಲದ ವ್ಯಕ್ತಿ. ವ್ಯವಹಾರ, ಕಾರ್ಖಾನೆ, ಸಂಘ-ಸಂಸ್ಥೆ ನಡೆಸುವವರಿಗೆ ಬೆಂಬಲಿಸುವುದು ಅಸಾಧ್ಯ. ನಾನೊಬ್ಬ ಫಕೀರ ಎಂದೇಳುವ ಪ್ರಧಾನಿ ಮೋದಿಯವರು ಈ ಚುನಾವಣೆಯಲ್ಲಿ ಬರೀ ಅಮೀರರಿಗೆ ಟಿಕೆಟ್‌ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next