Advertisement

Pakistan ತಂಡದ ನಾಯಕತ್ವ ಬಿಡುವ ಬಗ್ಗೆ ಯೋಚಿಸಿಲ್ಲ: ಬಾಬರ್‌

11:34 PM Jun 17, 2024 | Team Udayavani |

ಲಾಡರ್‌ಹಿಲ್‌ (ಫ್ಲೋರಿಡಾ): ಪಾಕಿಸ್ಥಾನ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸುವ ಮೊದಲೇ ಹೊರಬಿದ್ದ ಸಂಕಟಕ್ಕೆ ಸಿಲುಕಿದೆ. ತಂಡದ ವಿರುದ್ಧ ಎಲ್ಲ ದಿಕ್ಕುಗಳಿಂದಲೂ ಟೀಕೆಗಳು ವ್ಯಕ್ತವಾಗುತ್ತಿವೆ. ನಾಯಕ ಬಾಬರ್‌ ಆಜಂ ಅವರ ತಲೆದಂಡದ ಕೂಗು ದೊಡ್ಡ ಮಟ್ಟದಲ್ಲೇ ಕೇಳಿ ಬರುತ್ತಿದೆ.

Advertisement

ಆದರೆ ಸದ್ಯ ತಾನು ನಾಯಕತ್ವ ಬಿಡುವ ಬಗ್ಗೆ ಆಲೋಚಿಸಿಲ್ಲ ಎಂಬುದಾಗಿ ಬಾಬರ್‌ ಆಜಂ ಹೇಳಿದ್ದಾರೆ. “ನಾನು ಪಾಕಿಸ್ಥಾನಕ್ಕೆ ಮರಳಿದ ಬಳಿಕ ಇಲ್ಲಿ ಸಂಭವಿಸಿದ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಿದ್ದೇನೆ. ನಾಯಕತ್ವ ಬಿಡುವುದೇ ಆದಲ್ಲಿ ನಾನು ಬಹಿರಂಗವಾಗಿ ನಿಮಗೆ ತಿಳಿಸುತ್ತೇನೆ. ಪರದೆಯ ಹಿಂದೆ ನಾನು ಯಾವುದನ್ನೂ ಹೇಳುವುದಿಲ್ಲ, ಮುಚ್ಚಿಡುವುದೂ ಇಲ್ಲ. ಪಿಸಿಬಿ ನಿರ್ಧಾರವೇ ಅಂತಿಮ’ ಎಂಬುದಾಗಿ ಬಾಬರ್‌ ಆಜಂ ಹೇಳಿದರು.

ಪಾಕಿಸ್ಥಾನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಭಾರೀ ಒದ್ದಾಟ ನಡೆಸಿ 3 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಐರ್ಲೆಂಡ್‌ 9ಕ್ಕೆ 106 ರನ್‌ ಗಳಿಸಿದರೆ, ಪಾಕ್‌ 18.5 ಓವರ್‌ಗಳಲ್ಲಿ 7ಕ್ಕೆ 111 ರನ್‌ ಮಾಡಿ ಜಯ ಸಾಧಿಸಿತು. ಇದು ಲೀಗ್‌ ಹಂತದಲ್ಲಿ ಬಾಬರ್‌ ಪಡೆಗೆ ಒಲಿದ ಕೇವಲ 2ನೇ ಗೆಲುವು. ಅಮೆರಿಕ ಮತ್ತು ಭಾರತದ ವಿರುದ್ಧ ಸೋಲನುಭವಿಸುವ ಮೂಲಕ ಪಾಕ್‌ ಬಹಳ ಬೇಗ ನಿರ್ಗಮನ ಬಾಗಿಲಿಗೆ ಬಂದಿತ್ತು.
ಪಾಕಿಸ್ಥಾನ ತಂಡದಲ್ಲಿ ಗುಂಪುಗಾರಿಕೆ ಇದೆ; ಇಲ್ಲಿ ಒಂದಲ್ಲ ಎರಡಲ್ಲ, ಮೂರು ಬಣಗಳಿವೆ. ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌ ಮತ್ತು ಶಾಹಿನ್‌ ಶಾ ಅಫ್ರಿದಿ ಅವರ ಬಣಗಳಿವು. ಕೆಲವು ಆಟಗಾರರು ಪರಸ್ಪರ ಮಾತಾಡಿಕೊಳ್ಳುವುದೂ ಇಲ್ಲ, ಆಟಗಾರರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದೆಲ್ಲ ಸುದ್ದಿಯಾಗಿದೆ.

ಕರ್ಸ್ಟನ್‌ ಶಾಕಿಂಗ್‌ ಹೇಳಿಕೆ
ಕೋಚ್‌ ಗ್ಯಾರಿ ಕರ್ಸ್ಟನ್‌ ಕೂಡ ಈ ಕುರಿತು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. “ಪಾಕಿ ಸ್ಥಾನ ತಂಡದಲ್ಲಿ ಏಕತೆ ಇಲ್ಲ. ಆದರೂ ಇದನ್ನು ತಂಡ ವೆಂದು ಕರೆಯುತ್ತಾರೆ. ಆದರೆ ಇದು ಖಂಡಿತ ತಂಡವಲ್ಲ. ಆಟಗಾರರು ಎಡ-ಬಲದಂತೆ ಇದ್ದಾರೆ. ನಾನು ಅದಷ್ಟೋ ತಂಡಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂಥ ಅನುಭವ ಎಲ್ಲೂ ಆಗಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next