Advertisement

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

05:30 PM Oct 18, 2024 | Team Udayavani |

ಮಂಡ್ಯ : ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ(ಅ18)ಮತ್ತೊಂದು ಭೂ ಹಗರಣದ ಬಾಂಬ್ ಸಿಡಿಸಿದ್ದಾರೆ.

Advertisement

ಮೈಸೂರಿನ ಇನಕಲ್ ನಲ್ಲಿರುವ ಸಿದ್ದರಾಮಯ್ಯ ಅವರ ನಿವೇಶನ ಅಕ್ರಮವಾಗಿದ್ದು, ಈ ಪ್ರಕರಣ‌ ಕೋರ್ಟ್ ಆದೇಶ ಆಗಿದ್ದು, ಮುಡಾದ 14 ನಿವೇಶನ ಬೇರೆ, ಇದು ಬೇರೆ ವಿಚಾರ ಎಂದು ಹೇಳಿದ್ದಾರೆ.

”ಮೈಸೂರಿನ ಇನಕಲ್ ನಲ್ಲಿ 1986 ರಲ್ಲಿ 434 ಎಕರೆ ಜಮೀನು ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗಿತ್ತು. ಸತ್ಯಮೇವ ಜಯತೆ ಅನ್ನುತ್ತಾರೆ. ಸಿದ್ದರಾಮಯ್ಯ ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತದೆ ಅದನ್ನ ಸಿದ್ದರಾಮಯ್ಯ ಅವರು ಕೊಂಡುಕೊಂಡಿದ್ದಾರೆ. . 17/4 ರಲ್ಲಿ  ತೆಗೆದರೆ ಎಲ್ಲ ಗೊತ್ತಾಗುತ್ತದೆ” ಎಂದು ಎಚ್ ಡಿಕೆ ಗಂಭೀರ ಆರೋಪ ಮಾಡಿದ್ದಾರೆ.

ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆ ನಡೆಯುತ್ತಿರುವ ವೇಳೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ವೇಳೆಯಲ್ಲೇ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next