Advertisement

ಮಹಾಘಟ ಬಂಧನ್‌ ಅಲ್ಲ,ಮಹಾಠಕ್‌ ಬಂಧನ್‌’

01:49 AM Mar 09, 2019 | Team Udayavani |

ತುಮಕೂರು: ಪ್ರತಿಪಕ್ಷಗಳ ಮಹಾಘಟ ಬಂಧನ್‌, ಮಹಾ ಠಕ್‌ ಬಂಧನ್‌ ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಶಿವರಾಜ್‌ ಸಿಂಗ್‌ ಚೌಹಾಣ್‌ ಟೀಕಿಸಿದ್ದಾರೆ.

Advertisement

ನಗರದಲ್ಲಿ ಮಾತನಾಡಿ, ದೇಶದ ಎನ್‌ಡಿಎಯೇತರ ಎಲ್ಲಾಪಕ್ಷಗಳು ಒಂ ದಾಗಿ ರಚನೆ ಮಾಡಿಕೊಂಡಿರುವುದು ಮಹಾಘಟ ಬಂಧನ್‌ ಅಲ್ಲ, ಅದು ಮಹಾ ಠಕ್‌ ಬಂಧನ್‌. ಇದು ಸ್ವಾರ್ಥದ ಘಟಬಂಧನ್‌ ಎಂದು ಟೀಕಿಸಿದ ಅವರು, ಈ ಬಾರಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರಲಿದೆ. ಮೋದಿಯವರ ಸಮರ್ಥ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದ್ದು, ಈಗ ನಮ್ಮ ಸಂಕಲ್ಪ ಪತ್ರ ರೂಪುಗೊಳ್ಳುತ್ತಿದೆ. ದೇಶದಲ್ಲಿ 5 ವರ್ಷಗಳ ಕಾಲ ಪಾರದರ್ಶಕವಾಗಿ
ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next