Advertisement
ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ತೊಂದರೆಗೆ ಒಳಗಾದಾಗ ಬೆಳೆವಿಮೆ ಅವರನ್ನು ಬದುಕಿಸಲು ಸಹಾಯಕ್ಕೆ ಬರುತ್ತದೆ. ಈ ಉದ್ದೇಶದಿಂದ ಸರ್ಕಾರವೇ ಈ ಕೆಲಸ ಮಾಡಿದೆ. ಆದರೆ ಹೊಸ ತಾಲೂಕು ರಚನೆ ವೇಳೆ ಅಧಿಕಾರಿಗಳು ಮಾಡಿದ ಪ್ರಮಾದದಿಂದ ಧಾರವಾಡ ಜಿಲ್ಲೆಯ 10ಕ್ಕೂ ಹೆಚ್ಚು ಗ್ರಾಪಂ ರೈತರು ಸರ್ಕಾರ ಒದಗಿಸುವ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಧಿಕಾರಿಗಳು ಮಾಡಿದ ಪ್ರಮಾದದಿಂದ ರೈತರು ಮಾವು ಬೆಳೆ ವಿಮೆ ಕಂತು ತುಂಬಲು ಕಳೆದ ಮೂರು ದಿನಗಳ ಕಾಲ ಪಟ್ಟ ಪಾಡು ದೇವರಿಗೆ ಪ್ರೀತಿ ಎನ್ನಬಹುದು.
Related Articles
Advertisement
ಮತ್ತದೇ ತಪ್ಪು ಮರುಕಳಿಸಿತು: ಜುಲೈ ತಿಂಗಳಿನಲ್ಲಿ ಕೂಡ ಮುಂಗಾರು ಬೆಳೆಗಳ ಮೇಲೆ ರೈತರು ವಿಮೆ ಇರಿಸುವಾಗಲೂ ಜಿಲ್ಲೆಯ ಹೊಸ ತಾಲೂಕಿನ 20 ಹಳ್ಳಿಗಳದ್ದೂ ಇದೇ ಸಮಸ್ಯೆ ಎದುರಾಗಿತ್ತು. ಇದೀಗ ನಾಲ್ಕು ತಿಂಗಳಾದರೂ ಅದೇ ತಪ್ಪನ್ನು ಅಧಿಕಾರಿಗಳು ಮತ್ತೆ ಮಾಡುತ್ತಿದ್ದಾರೆ ಎಂದರೆ, ಜಿಲ್ಲೆಯಲ್ಲಿನ ಆಡಳಿತ ಹೇಗಿದೆ ಎನ್ನುವುದನ್ನು ಇದರ ಮೇಲೆ ಗಮನಿಸಬಹುದು. ಒಂದು ವೆಬ್ಸೈಟ್ನಲ್ಲಿನ ಸಣ್ಣ ಕೆಲಸವನ್ನು ಮಾಡಲು ನಾಲ್ಕು ತಿಂಗಳಾದರೂ ಆಗಿಲ್ಲ ಅಂದರೆ ಹೇಗೆ ಎನ್ನುವ ಪ್ರಶ್ನೆಯನ್ನು ಅನೇಕ ರೈತ ಮುಖಂಡರು ಜಿಲ್ಲಾಡಳಿತಕ್ಕೆ ಹಾಕಿದ್ದಾರೆ.
ರಾತ್ರಿ ಆರಂಭಗೊಂಡ ಸರ್ವರ್: ಮಾವು ವಿಮೆ ಇರಿಸಲು ಬಂದವರಿಗೆ ಸಾಕಷ್ಟು ತೊಂದರೆ ಮಧ್ಯೆಯೂ ಕೊನೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬ್ಯಾಂಕ್ ಗಳು ವಿಮಾ ಹಣವನ್ನು ಪಡೆದುಕೊಂಡವು. ಕೊನೆಗೆ ರಾತ್ರಿ ಹೊತ್ತಿಗೆ ಈ ಎಲ್ಲಾ ಹಳ್ಳಿಗಳು ಮತ್ತೆ ಅಳ್ನಾವರ ಹೋಬಳಿ ವ್ಯಾಪ್ತಿಯಲ್ಲೇ ಇರುವಂತೆ ಸಂರಕ್ಷಣ ವೆಬ್ ತೆರೆದುಕೊಂಡಿತು. ಅರ್ಜಿ ಉಳಿಕೆ ಯಶಸ್ವಿಯಾಗಿದೆ ಎನ್ನುವ ಸಂದೇಶಗಳು ಕೆಲವು ರೈತರ ಮೊಬೈಲ್ಗಳಿಗೆ ಬಂದಿವೆ. ಆದರೆ ಅರ್ಜಿ ಉಳಿಕೆ ನಂತರ ಪರತ್ ರಶೀದಿ ಯಾವ ರೈತರಿಗೂ ಸಿಕ್ಕಿಲ್ಲ.
ಒಂದೇ ಸರ್ವೇ ನಂಬರ್ಗೆ ಇಬ್ಬರು ರೈತರ ವಿಮೆ ಕಂತು!ಧಾರವಾಡ ಹೋಬಳಿಯಲ್ಲಿನ ಪಹಣಿ ಪತ್ರಗಳಲ್ಲಿ ನಮೂದಾಗಿರುವ ಹೊಲಗಳ ಸರ್ವೇ ನಂಬರ್ಗಳಿಗೂ, ನೂತನ ಧಾರವಾಡ ಹೋಬಳಿ ವ್ಯಾಪ್ತಿಯಲ್ಲಿನ ಹೊಲದ ಸರ್ವೇ ನಂಬರ್ಗಳು ಒಂದೇ ಎಂದೂ ನಮೂದಾದರೆ ಮತ್ತೆ ರೈತರು ಹಣ ಕಟ್ಟಿ ಸಂಕಷ್ಟಕ್ಕೆ ಒಳಗಾಗಬೇಕು. ಯಾಕೆಂದರೆ ನ.14ರಂದು ಅಳ್ನಾವರ ಹೋಬಳಿಯಲ್ಲಿ 36 ಸರ್ವೇ ನಂ.ಗೆ ಎ ಅನ್ನುವವರು ವಿಮೆ ತುಂಬಿದ್ದಾರೆ. ಇದು ಹೊಸ ಹೋಬಳಿಯಾಧಾರಿತವಾಗಿ ಬಂದ ಸರ್ವೇ ನಂಬರ್ ಆಗಿರುತ್ತದೆ. ಆದರೆ ನ.15ರಂದು ಮತ್ತೆ ಹಳೆಯ ಅಳ್ನಾವರ ಹೋಬಳಿ ಸರ್ವೇ ನಂ.ಗಳ ಆಧಾರದ ಮೇಲೆ 36 ಸರ್ವೇ ನಂ.ಗೆ ಬಿ ಎನ್ನುವವನ ಹೆಸರು ಇರುತ್ತದೆ. ಹಾಗಿದ್ದರೆ ವಿಮೆ ಕಂತು ಇಬ್ಬರು ತುಂಬಿದ್ದಾರೆ. ನಾಳೆ ಬೆಳೆ ವಿಮೆ ಯಾರಿಗೆ ಬರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇದನ್ನು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆ ಪರಿಹರಿಸುತ್ತಾರೋ ದೇವರಿಗೆ ಗೊತ್ತು. ಅಲ್ಲಿ ಆರು ಜನ ಮಕ್ಕಳು ಒಂದೆ ದಿನ ಒಂದೇ ಸಮಯಕ್ಕ ಸಗ್ತಾರಾ ? ಕೆಲಸದ ಮ್ಯಾಲೆ ಬ್ಯಾರೇ ಊರಿಗೆ ಹೋಗಿರ್ತಾರ. ಮಾವು ವಿಮೆಗೆ ಇಂತಹ ಹೊಸ ಕಾನೂನು ಬಂದಿದ್ದನ್ನು ಬ್ಯಾಂಕ್ ಅಧಿಕಾರಿಗಳು ಯಾಕೆ ನಮಗೆ ಮೊದಲೇ ಇಳಿಸಲಿಲ್ಲ. ರೈತರಂದ್ರೆ ಇವರಿಗೆ ಇಷ್ಟು ಕೇವಲಾನಾ ?
. ಈರಪ್ಪ ಕುಂದಗೋಳ, ರೈತ ವರ್ಷಕ್ಕೊಂದೊಂದು ಕಾನೂನು ಮಾಡತಾರು. ಮಾವು ವಿಮೆ ಇಡುವುದಕ್ಕೆ ಜಂಟಿ ಪಹಣಿ ಪತ್ರ ಇರುವ ಎಲ್ಲರದ್ದು ಸಹಿ ಖುದ್ದು ಹಾಜರಾಗಿ ಇಡುವಂತೆ ಹೇಳುತ್ತಿದ್ದಾರೆ. ಇದು ಯಾವ ನ್ಯಾಯ. ನನ್ನ ಅಣ್ಣ ಆಸ್ಪತ್ರೆಯಲ್ಲಿದ್ದಾನೆ. ಅವನ ಸಹಿ ಮಾಡಿಸಿಕೊಂಡು ಬರುವುದು ಹೇಗೆ ? ಇಂದೇ ಕೊನೆ ದಿನ. ಇದನ್ನ ಯಾರೂ ಕೇಳುವವರಿಲ್ಲವೇ ?
. ಖಾದರಸಾಬ್ ಮುಲ್ಲಾ, ಮುರುಕಟ್ಟಿ ನಿವಾಸಿ ಸಂರಕ್ಷಣ ವೆಬ್ಸೈಟ್ನಲ್ಲಿ ಕೆಲವು ಹಳ್ಳಿಗಳ ಹೊಲಗಳ ಸರ್ವೇ ನಂ.ಗಳು ನಮೂದಾಗದೇ ಹೋಗಿದ್ದರಿಂದ ಆನ್ ಲೈನ್ ವಿಮೆಕಂತು ತುಂಬುವ ಪೇಜ್ಗಳು ತೆರೆದುಕೊಂಡಿಲ್ಲ. ಆದರೆ ಸಂಜೆ ಹೊತ್ತಿಗೆ ನಾವು ಸರಿ ಮಾಡಿದ್ದೇವೆ.
. ಮೊಹಮ್ಮದ್ ಜುಬೇರ್, ಉಪ ವಿಭಾಗಾಧಿಕಾರಿ,ಧಾರವಾಡ ಬಸವರಾಜ ಹೊಂಗಲ್