Advertisement

North India ಮಂಜಿನ ಹೊದಿಕೆ ; ವಿಪರೀತ ಚಳಿ, ಝಾರ್ಖಂಡ್‌ ಶಾಲೆಗಳಿಗೆ ರಜೆ

01:07 AM Dec 22, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ, ಪಂಜಾಬ್‌, ಹರಿಯಾಣ ಸೇರಿ ಉತ್ತರ ಭಾರತದಲ್ಲಿ ಚಳಿಗಾಳಿ ತೀವ್ರಗೊಂಡಿದ್ದು, ದಟ್ಟ ಮಂಜು ಆವರಿಸಿದೆ. ಮುಂದಿನ 3 ದಿನಗಳಲ್ಲಿ ಪಂಜಾಬ್‌, ಹರಿಯಾಣ, ಅಸ್ಸಾಂ, ಮೇಘಾಲಯ, ನಾಗಾ ಲ್ಯಾಂಡ್‌, ಮಿಜೋರಾಂ, ಮಣಿಪುರ ಮತ್ತು ತ್ರಿಪುರಾದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ರಜೆ ಘೋಷಣೆ: ವಿಪರೀತ ಚಳಿಯ ಕಾರಣ ಡಿ. 26ರಿಂದ 31ರ ವರೆಗೆ ಝಾರ್ಖಂಡ್‌ನ‌ ಎಲ್ಲ ಸರಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಮ್ಮು – ಕಾಶ್ಮೀರದಲ್ಲಿ ತೀವ್ರ ಚಳಿಯ ಅವಧಿ “ಚಿಲ್ಲಾ-ಇ-ಕಲನ್‌’ ಗುರುವಾರ ದಿಂದ ಆರಂಭವಾಗಿದೆ. ಈ ಸಮಯದಲ್ಲಿ ಕಾಶ್ಮೀರದ ಹಲವು ಭಾಗಗಳು ಚಳಿಯಿಂದ ತತ್ತರಿಸಲಿದ್ದು, ನೀರು ಮಂಜುಗಡ್ಡೆಯಾಗಲಿದೆ. ಜ. 31 ರಂದು “ಚಿಲ್ಲಾ – ಇ – ಕಲನ್‌’ ಮುಗಿಯಲಿದೆ.  ಇದೇ ವೇಳೆ ಮಂಗಳವಾರ ರಾತ್ರಿ ಶ್ರೀನಗರದಲ್ಲಿ -4.3 ಡಿ.ಸೆ., ಪಹಲ್ಗಾಮ್‌ನಲ್ಲಿ -5.8 ಡಿ.ಸೆ., ಗುಲ್ಮಾರ್ಗ್‌ ನಲ್ಲಿ -3.0 ಡಿ.ಸೆ. ಮತ್ತು ಕುಪ್ವಾರಾದಲ್ಲಿ -4.0 ಡಿ.ಸೆ. ದಾಖಲಾಗಿದೆ. ದಿಲ್ಲಿಯಲ್ಲಿ 6 ಡಿ.ಸೆ. ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next