Advertisement

ಬಿಲ್‌ ಪಾವತಿ ಮಾಡಿಲ್ಲವೆಂದು ಬೆಡ್‌ಗೆ ವೃದ್ಧನ ಕಟ್ಟಿದರು!

12:40 PM Jun 08, 2020 | mahesh |

ಭೋಪಾಲ್‌: ಚಿಕಿತ್ಸೆಯ ಬಿಲ್‌ ಪಾವತಿ ಮಾಡಿಲ್ಲ ಎಂದು ಆರೋಪಿಸಿ 80 ವರ್ಷ ಪ್ರಾಯದ ವೃದ್ಧರನ್ನು ಬೆಡ್‌ನ‌ಲ್ಲೇ ಕಟ್ಟಿ ಹಾಕಿದ ಅಮಾನವೀಯ ಘಟನೆ ನಡೆದಿದೆ. ಮಧ್ಯಪ್ರದೇಶದ ಶಾಜಾಪುರದ ಆಸ್ಪತ್ರೆಯಲ್ಲಿ ನಡೆದಿದೆ. ಈ ವಿಚಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ವರೆಗೂ ತಲುಪಿದ್ದು, ವೃದ್ಧರಿಗೆ ನ್ಯಾಯ ದೊರಕಿಸಲಾಗುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ. ಪೊಲೀಸರೂ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

ಇದೇ ವೇಳೆ, ಜಿಲ್ಲಾಧಿಕಾರಿ ವೀರೇಂದ್ರ ಸಿಂಗ್‌ ರಾವತ್‌ ಹಿರಿಯ ಅಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವೃದ್ಧ “ಆಸ್ಪತ್ರೆಗೆ ದಾಖಲಾಗುವಾಗ 5 ಸಾವಿರ ರೂ.ಪಾವತಿ ಮಾಡಿದ್ದೆ. ಡಿಸ್ಚಾರ್ಜ್‌ ಆಗುವ ಸಂದರ್ಭದಲ್ಲಿ 11,000 ರೂ. ಪಾವತಿ ಮಾಡಲು ತಿಳಿಸಲಾಯಿತು. ನನ್ನಲ್ಲಿ ಅಷ್ಟು ಹಣ ಇಲ್ಲದಿದ್ದುದರಿಂದ ಬೆಡ್‌ಗೆ ಕಟ್ಟಿದರು’ ಎಂದು ದೂರಿದ್ದಾರೆ.

ಆರೋಪ ತಳ್ಳಿಹಾಕಿದ ಆಸ್ಪತ್ರೆ ವೃದ್ಧರಿಗೆ ಸ್ನಾಯುಗಳ ಮೇಲಿನ ನಿಯಂತ್ರಣ ಸಮಸ್ಯೆ ಇತ್ತು. ಅವರು ಅವರನ್ನೇ ತೊಂದರೆಗೀಡು ಮಾಡಿಕೊಳ್ಳುವ ಸಾಧ್ಯತೆಗಳು ಇದ್ದ ಕಾರಣ ಅವರನ್ನು ಮಂಚಕ್ಕೆ ಕಟ್ಟಿಹಾಕಲಾಯಿತು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next