Advertisement

“ನೆಹರೂ ಕುಟುಂಬಕ್ಕೆ ಸೇರದವರು ನಾಯಕರಾಗಲಿ’

11:23 PM Jun 30, 2019 | Team Udayavani |

ಹೊಸದಿಲ್ಲಿ: ಒಂದೆಡೆ, ಕಾಂಗ್ರೆಸ್‌ ಅಧ್ಯಕ್ಷಗಿರಿಯನ್ನು ತೊರೆಯುವುದಾಗಿ ರಾಹುಲ್‌ ಗಾಂಧಿ ಪಟ್ಟು ಹಿಡಿದಿರು ವಾಗಲೇ, ಮತ್ತೂಂದೆಡೆ ಅವರೇ ಅಧ್ಯಕ್ಷರಾಗಿ ಮುಂದುವರಿ ಯಬೇಕೆಂದು ಪಟ್ಟು ಹಿಡಿದು ವಿವಿಧ ರಾಜ್ಯಗಳಲ್ಲಿನ ಪದಾಧಿಕಾರಿಗಳು ಸರಣಿ ರಾಜೀನಾಮೆ ಸಲ್ಲಿಸುತ್ತಿರುವುದು ಮುಂದುವರಿದಿದೆ.

Advertisement

ಇದೆಲ್ಲದರ ನಡುವೆ ಮಹಾರಾಷ್ಟ್ರದ ಯುವ ಕಾಂಗ್ರೆಸ್‌ ನಾಯಕ ಆನಂದ್‌ ದುಬೆ ಎಂಬವರು ರಾಹುಲ್‌ಗೆ ನೇರವಾಗಿ ಪತ್ರವೊಂದನ್ನು ಬರೆದು “ಕಾಂಗ್ರೆಸ್‌ ಅಧ್ಯಕ್ಷ ಗಾದಿಗೆ ಗಾಂಧಿ- ನೆಹರೂ ಕುಟುಂಬದವರಲ್ಲದ ಬೇರೊಬ್ಬ ವ್ಯಕ್ತಿಯು ಆರಿಸಿ ಬರಲಿ’ ಎಂದು ಆಗ್ರಹಿಸುವ ಮೂಲಕ “ವಿಧೇಯ ಕಾಂಗ್ರೆಸಿಗರು’ ಹುಬ್ಬೇರಿಸುವಂತೆ ಮಾಡಿದ್ದಾರೆ. ಚುನಾವಣಾ ವೈಫ‌ಲ್ಯದಿಂದ ನಾಯಕತ್ವ ತೊರೆಯುವ ಪದ್ಧತಿ ಬೇರೆ ಪಕ್ಷಗಳಲ್ಲಿ ಇದೆ. ಅದು ಕಾಂಗ್ರೆಸ್‌ ನಲ್ಲೂ ಬಂದರೆ ತಪ್ಪೇನು ಎಂದೂ ದುಬೆ ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next