Advertisement

Tamil Nadu ಬಿಜೆಪಿ ನಿಯೋಗದಲ್ಲಿ ಡಿ.ವಿ.ಸದಾನಂದ ಗೌಡ

10:56 PM Oct 22, 2023 | Team Udayavani |

ನವದೆಹಲಿ:ತಮಿಳುನಾಡಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಡಿಎಂಕೆ ಸರ್ಕಾರವು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಈಗ ಈ ಕುರಿತು ಪರಿಶೀಲಿಸಲು ನಾಲ್ವರು ಸದಸ್ಯರ ನಿಯೋಗವೊಂದನ್ನು ತ.ನಾಡಿಗೆ ಕಳುಹಿಸಲು ನಿರ್ಧರಿಸಿದೆ.

Advertisement

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಡಾ.ಸತ್ಯಪಾಲ್‌ ಸಿಂಗ್‌, ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷೆ ಡಿ. ಪುರಂದೇಶ್ವರಿ ಮತ್ತು ಸಂಸದ ಪಿ.ಸಿ. ಮೋಹನ್‌ ಅವರು ಈ ನಿಯೋಗದಲ್ಲಿದ್ದಾರೆ.

ತ.ನಾಡಿಗೆ ಭೇಟಿ ನೀಡಲಿರುವ ನಿಯೋಗವು ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ಪರಿಶೀಲಿಸಿ ಆದಷ್ಟು ಬೇಗ ವರದಿ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next