Advertisement

ಎನ್ ಓಸಿ ನಿರಾಕರಣೆ: ಅರಣ್ಯ ಇಲಾಖೆ ಕಚೇರಿ ಮೇಲೇರಿ ಪ್ರತಿಭಟನೆ ನಡೆಸಿದ ಗ್ರಾಪಂ ಉಪಾಧ್ಯಕ್ಷ

12:18 PM Dec 04, 2019 | Mithun PG |

ಶಿವಮೊಗ್ಗ: ವಾಸದಮನೆ ಹಕ್ಕುಪತ್ರಕ್ಕೆ ಎನ್ ಓಸಿ ನೀಡದ ಹಿನ್ನೆಲೆ, ಅರಣ್ಯ ಕಚೇರಿ ಕಟ್ಟಡದ ಮೇಲೇರಿ ಗ್ರಾಪಂ ಉಪಾಧ್ಯಕ್ಷ ವಿನೂತನ ಪ್ರತಿಭಟನೆ ಮಾಡಿದ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಮೂಡುಗೊಪ್ಪ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಹೊಸನಗರ ತಾಲೂಕು ನಗರ ವಲಯ ಅರಣ್ಯಾಧಿಕಾರಿ ಕಚೇರಿ ಮೇಲೆ ಕುಳಿತು ಈ ರೀತಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿರುವವರು.

Advertisement

128 ಕುಟುಂಬಗಳಿಗೆ ಹಕ್ಕುಪತ್ರ ನೀಡದ ಹಿನ್ನೆಲೆ, ಸಾಕಷ್ಟು ಪ್ರತಿಭಟನೆ ಮಾಡಿದ್ದರು ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಕಛೇರಿ ಕಟ್ಟಡ ಮೇಲೇರಿ, ಅರಣ್ಯ ಇಲಾಖೆ NOC ನೀಡುವ ವರೆಗೆ ಕೆಳಗಿಳಿಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next