Advertisement

ನೀರು ವಿತರಣೆಗೆ ಜಲಮೂಲ ಕೊರತೆ

02:18 PM Jun 03, 2019 | Suhan S |

ಕುಮಟಾ: ಪಟ್ಟಣದಲ್ಲಿ ಟ್ಯಾಂಕರ್‌ ನೀರಿನ ವಿತರಣೆಗೆ ಜಲಮೂಲಗಳ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿನ ಹಳೆಯ ಬೋರ್‌ವೆಲ್ಗಳು, ಕೆರೆ, ಬಾವಿಗಳನ್ನು ಗುರುತಿಸಿ ಉತ್ತಮ ನೀರು ಪಡೆಯುವ ಶಾಸಕ ದಿನಕರ ಶೆಟ್ಟಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ನೆಲ್ಲಿಕೇರಿ ಕೃಷಿ ಸಂಶೋಧನಾ ಕೇಂದ್ರದ ಬೋರ್‌ವೆಲ್ನಲ್ಲಿ ಭಾನುವಾರ ಉತ್ತಮವಾದ, ಹೇರಳ ನೀರು ಲಭಿಸಿದೆ.

Advertisement

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಅಘನಾಶಿನಿ ನೀರು ಸಂಪೂರ್ಣ ಬತ್ತಿರುವುದರಿಂದ ಪಟ್ಟಣದ ಖಾಸಗಿ ಹಾಗೂ ಸರ್ಕಾರಿ ಬೋರ್‌ವೆಲ್ಗಳನ್ನು ಶೋಧಿಸುತ್ತಿದ್ದೇವೆ. ಈಗಾಗಲೇ ಯಾತ್ರಿ ನಿವಾಸದ ಬೋರ್‌ವೆಲ್ ನೀರನ್ನು ಪಟ್ಟಣಕ್ಕೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಬಳಸಲಾಗುತ್ತಿದೆ. ಈಗ ನೆಲ್ಲಿಕೇರಿಯ ಬೋರ್‌ವೆಲ್ನಲ್ಲಿಯೂ ಉತ್ತಮವಾದ ನೀರು ಲಭಿಸಿದೆ. ಇದನ್ನು ಹೊರತುಪಡಿಸಿ ಬೇರೆ ಬೇರೆ ಕಡೆಗಳಲ್ಲಿಯೂ ನೀರಿನ ಮೂಲಗಳನ್ನು ಹುಡುಕಿದ್ದೇವೆ. ಪಟ್ಟಣಕ್ಕೆ ಸಾಕಾಗುವಷ್ಟು ನೀರು ಪಟ್ಟಣದಲ್ಲಿಯೇ ದೊರೆಯುತ್ತಿತ್ತು. ಆದರೆ ತಾಲೂಕು ಆಡಳಿತ, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಈ ಬಗೆಗೆ ಮುತುವರ್ಜಿ ವಹಿಸುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next