Advertisement

ಜ. 26 ಗಣರಾಜ್ಯೋತ್ಸವ: ಜನಸಾಮಾನ್ಯರಿಗೆ ಮೊದಲ ಸಾಲು

08:42 PM Jan 19, 2023 | Team Udayavani |

ಹೊಸದಿಲ್ಲಿ: ಗಣರಾಜ್ಯೋತ್ಸವ ವೇಳೆ ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಪಥಸಂಚಲನ ಮತ್ತು ಇತರ ಕಾರ್ಯಕ್ರಮಗಳ ವೀಕ್ಷಣೆಗೆ ಮೊದಲ ಸಾಲಿನ ಆಸನಗಳನ್ನು ಜನಸಾಮಾನ್ಯರಿಗೆ ಮೀಸಲಾಗಿ ಇರಿಸಲಾಗುತ್ತದೆ. ತರಕಾರಿ ಮಾರುವವರು, ರಿಕ್ಷಾ ಚಾಲಕರು, ಸೆಂಟ್ರಲ್‌ ವಿಸ್ತಾ ಕಾಮಗಾರಿಯಲ್ಲಿ ಕೆಲಸ ಮಾಡಿದವರು ಮತ್ತು ಅವರ ಕುಟುಂಬ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ.

Advertisement

“ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗಿ’ ಎಂಬ ಶೀರ್ಷಿಕೆಯ ಅಡಿ ಈ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರೇಡ್‌ ವೀಕ್ಷಣೆಗಾಗಿ ಇರುವ ಆಸನಗಳ ಸಂಖ್ಯೆಯನ್ನು 45 ಸಾವಿರಕ್ಕೆ ಇಳಿಸಲಾಗಿದೆ. ಈ ಪೈಕಿ 32 ಸಾವಿರ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಈ ವರ್ಷದ ಗಣರಾಜ್ಯದಿನಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ಧೆಲ್‌ ಫ‌ತಾ ಅಲ್‌-ಸಿಸಿ ಮುಖ್ಯ ಅತಿಥಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next