Advertisement

‘ವಿವಿಐಪಿ ಸಂಸ್ಕೃತಿಗೆ ಅವಕಾಶವೇ ಇಲ್ಲ’ : ಹ್ಯಾಂಡ್‌ ಪಂಪ್‌ನಲ್ಲೇ ಸ್ನಾನ ಮಾಡಿದ ಉ.ಪ್ರ ಸಚಿವ

08:51 PM May 07, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ ಗುಪ್ತಾ ವಿಶೇಷವಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Advertisement

ಇತ್ತೀಚೆಗೆ ಶಹಜಹಾನ್‌ಪುರಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದಾಗ ಅವರು ಹ್ಯಾಂಡ್‌ ಪಂಪ್‌ ಸಮೀಪ ಸ್ನಾನ ಮಾಡಿ ಸರಳತೆ ಮೆರೆದಿದ್ದಾರೆ.

ಜತೆಗೆ “ವಿವಿಐಪಿ ಸಂಸ್ಕೃತಿಗೆ ಅವಕಾಶವೇ ಇಲ್ಲ’ ಎಂದು ಅದನ್ನು ಕೂ ಆ್ಯಪ್‌ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

“ಇತ್ತೀಚೆಗೆ ಶಹಜಹಾನ್‌ಪುರದ ಚಕ್‌ ಕಾನ್ಹಾವು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಳಗ್ಗೆ ಒಂದು ಕಪ್‌ ಚಹಾ ಕುಡಿದೆ ಮತ್ತು ಉತ್ತಮ ಸ್ನಾನದಿಂದ ದಿನ ಶುರು ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next