Advertisement

Congress ವಲಸೆ ಬಂದ ದತ್ತಾಗೆ ಇಲ್ಲ ಟಿಕೆಟ್: ಬಂಡಾಯದ ಕ್ಷೇತ್ರಗಳಿಗೆ ಕೈ ಹಾಕದ ಕೈ ಹೈಕಮಾಂಡ್

01:15 PM Apr 06, 2023 | Team Udayavani |

ಚಿಕ್ಕಮಗಳೂರು: ನಿರೀಕ್ಷೆಯಂತೆಯೇ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಆದರೆ ಕೆಲವು ನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದೆ, ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.

Advertisement

ಬಂಡಾಯವಿರುವ ಕ್ಷೇತ್ರಗಳಿಗೆ ಕೈ ಹಾಕದ ಕೈ ಹೈಕಮಾಂಡ್, ಕಡೂರು ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ. ಜೆಡಿಎಸ್ ನಿಂದ ವಲಸೆ ಬಂದಿದ್ದ ವೈ. ಎಸ್.ವಿ. ದತ್ತಾಗೆ ಟಿಕೆಟ್ ಮಿಸ್ ಆಗಿದ್ದು, ಕೆ.ಎಸ್. ಆನಂದ್ ಗೆ ಟಿಕೆಟ್ ನೀಡಲಾಗಿದೆ.

ಜಿಲ್ಲೆಯಲ್ಲಿ ಗೊಂದಲವಿರುವ ಕ್ಷೇತ್ರಗಳಿಗೆ ವರಿಷ್ಠರು ಈ ಬಾರಿಯೂ ಟಿಕೆಟ್ ಘೋಷಣೆ ಮಾಡಿಲ್ಲ. ಬಂಡಾಯ ಎದುರಿಸುವ ಕ್ಷೇತ್ರಗಳಾದ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆಗೆ ಫೈನಲ್ ಮಾಡಿಲ್ಲ.

ಇದನ್ನೂ ಓದಿ:ಗೋಕಾಕ ಅಚ್ಚರಿ: ಅಶೋಕ ಪೂಜಾರಿಗೆ ಕೈ ತಪ್ಪಿದ ಟಿಕೆಟ್; ಹೊಸಮುಖಕ್ಕೆ ಮಣೆ

ಎಚ್ ಡಿ ತಮ್ಮಯ್ಯ ಆಗಮನದಿಂದ ಭಾರೀ ಕುತೂಹಲ ಮೂಡಿಸಿರುವ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಇನ್ನೂ ಮುಂದುವರಿದಿದೆ. ಚಿಕ್ಕಮಗಳೂರಲ್ಲಿ ತಮ್ಮಯ್ಯ ವಿರುದ್ಧ ಆರು ಜನ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next