Advertisement

ಬಿಜೆಪಿ ಜತೆ ಮಾತುಕತೆ ಪ್ರಸ್ತಾಪವೇ ಇಲ್ಲ: ಎಚ್‌ಡಿಕೆ

01:00 AM Jul 12, 2019 | Sriram |

ಬೆಂಗಳೂರು: “ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟ ಸರ್ಕಾರ ಸುಭದ್ರವಾಗಿದೆ. ನಾಳೆಯಿಂದ ನಾವು ಸದನವನ್ನು ಸಮರ್ಥವಾಗಿ ನಡೆಸಲು ಸಿದ್ಧವಾಗಿದ್ದೇವೆ. ಬಿಜೆಪಿ ಜತೆ ಮಾತುಕತೆ ನಡೆಸಲು ನಾನು ಯಾರಿಗೂ ಹೊಣೆಗಾರಿಕೆ ಕೊಟ್ಟಿಲ್ಲ, ಅಂತಹ ಯಾವುದೇ ಬೆಳವಣಿಗೆಯೂ ನಡೆದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಸ್ಪಷ್ಟಪಡಿಸಿದ್ದಾರೆ.

Advertisement

ಸಾ.ರಾ.ಮಹೇಶ್‌ ಅವರು ಪ್ರವಾಸೋದ್ಯಮ ಸಚಿವರಿದ್ದು ಅವರು ಕುಮಾರಕೃಪ ಅತಿಥಿಗೃಹಕ್ಕೆ ಆಗಾಗ್ಗೆ ಹೋಗುತ್ತಿರುತ್ತಾರೆ. ಅವರ ಭೇಟಿ ಬಗ್ಗೆ ಮಾಹಿತಿ ಪಡೆಯುತ್ತೇನೆ. ಜೆಡಿಎಸ್‌ ವತಿಯಿಂದ ಯಾವುದೇ ಪ್ರಸ್ತಾವನೆ ಬಿಜೆಪಿ ನಾಯಕರಿಗೆ ತಲುಪಿಸಿಲ್ಲ.ಈ ಸಂದರ್ಭದಲ್ಲಿ ಇಂತಹ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಈ ಬಗ್ಗೆ ಯಾರಿಗೂ ಅಪನಂಬಿಕೆ ಅಥವಾ ಸಂಶಯ ಬೇಡ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next