Advertisement

ಎಸ್ಪಿಯಲ್ಲಿ ಬಿಕ್ಕಟ್ಟಿಲ್ಲ, ಹೊಸ ಪಕ್ಷ ಸದ್ಯಕ್ಕಿಲ್ಲ: ಮುಲಾಯಂ

06:40 AM Sep 26, 2017 | |

ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಸದ್ಯಕ್ಕೆ ಹೊಸ ಪಕ್ಷ ಸ್ಥಾಪಿಸುವ ಯೋಚನೆಯೂ ಇಲ್ಲ ಎಂದು ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಸೋಮವಾರ ಹೇಳಿದ್ದಾರೆ.

Advertisement

ಈ ಮೂಲಕ “ಲೋಕದಳ’ದ ಹೆಸರಲ್ಲಿ ಮುಲಾಯಂ ಅವರು ಹೊಸ ಪಕ್ಷ ಘೋಷಿ ಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಸೋಮವಾರ ಮಾತನಾಡಿದ ಅವರು, “ಪಕ್ಷದೊಳಗೆ ಬಿಕ್ಕಟ್ಟು ಇಲ್ಲ. ಪುತ್ರ ಅಖೀಲೇಶ್‌ ನಿರ್ಧಾರವನ್ನು ಒಪ್ಪುವುದಿಲ್ಲವಾದರೂ, ನನ್ನ ಆಶೀರ್ವಾದ ಯಾವತ್ತೂ ಅವನ ಮೇಲಿರುತ್ತದೆ’ ಎಂದಿದ್ದಾರೆ. ವಿಶೇಷವೆಂದರೆ, ಈ ಸುದ್ದಿಗೋಷ್ಠಿಗೆ ಶಿವಪಾಲ್‌ ಯಾದವ್‌ ಗೈರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next